ಕಾಯಕಿಂಗ್‌ನಲ್ಲಿ ತೆರಳಿ ಸೀತಾನದಿ ಮಧ್ಯೆ ಧ್ವಜಾರೋಹಣ

Update: 2022-08-16 12:15 GMT

ಬ್ರಹ್ಮಾವರ, ಆ.16: ಸಾಲಿಗ್ರಾಮ ಕಾಯಕಿಂಗ್ ಪಾಯಿಂಟ್ ತಂಡವು ಸೀತಾ ನದಿ ಮಧ್ಯದಲ್ಲಿ ಕಾಯಕಿಂಗ್ ಮೂಲಕ ತೆರಳಿ ನದಿಯ ಮಧ್ಯೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ವನ್ನು ಆಚರಿಸಿತು.

ಹಿರಿಯ ಗುರಿಕಾರ ಕೂಸ ಮರಕಾಲ ಧ್ವಜಾರೋಹಣ ನೆರವೇರಿಸಿದರು.  ಪ್ರಕೃತಿ ಮದ್ಯದಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಪ್ರಯತ್ನ ಮಾಡಿದ್ದೇವೆ. ಈ ಹಿಂದೆ ಯಾರೂ ಮಾಡಿರದ ರೀತಿಯಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ಭಾರತಾಂಬೆಯನ್ನು ನಿಲ್ಲಿಸಿ ಜನರಲ್ಲಿ ಪ್ರಕೃತಿ ಪ್ರೇಮದ ಜೊತೆಗೆ ರಾಷ್ಟ್ರ ಪ್ರೇಮವನ್ನು ಬಿತ್ತುವ ಸಲುವಾಗಿ ಈ ಕಾರ್ಯಕ್ಕೆ ಮುಂದಾಗಿ ನದಿ ಮದ್ಯದಲ್ಲಿ ರಾಷ್ಟ್ರ ಧ್ವಜ ಹಾರಾಡಿಸಿದ್ದೇವೆ ಎಂದು ತಂಡದ ಪ್ರತಿನಿಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News