ದನ ಕಳವು ಆರೋಪ: ಐವರ ಸೆರೆ

Update: 2022-08-16 15:08 GMT

ಮಂಗಳೂರು, ಆ.16: ಬಜಾಲ್ ಗ್ರಾಮದ ದೋಟ ಹೌಸ್ ನಿವಾಸಿ ಅಶ್ವಿನ್ ಎಂಬವರ ಕೊಟ್ಟಿಗೆಯಿಂದ ದನವನ್ನು ಕಳವುಗೈದ ಆರೋಪದ ಮೇರೆಗೆ ಐವರನ್ನು ಬಂಧಿಸಲಾಗಿದೆ ಎಂದು ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಗ್ಲಗುಡ್ಡೆಯ ಮುಹಮ್ಮದ್ ಅಶ್ಪಕ್ ಯಾನೆ ಶಮೀರ್ ಯಾನೆ ಶಮ್ಮಿ (22), ಆದ್ಯಪಾಡಿಯ ಅಝರುದ್ದೀನ್ ಯಾನೆ ಅಝರ್ (31), ಬಜಾಲ್ ಪಡ್ಪುವಿನ ಸುಹೈಲ್ (19), ಬಜಾಲ್ ಪಕ್ಕಲಡ್ಕದ ಮುಹಮ್ಮದ್ ಅಫ್ರಿದಿ (25), ಬಜಾಲ್ ಕಟ್ಟಪುಣಿಯ ಶಾಹಿದ ಯಾನೆ ಚಾಯಿ (19) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಾರು, ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜು. 20ರಂದು ಸಂಜೆ 6ಕ್ಕೆ ದನವನ್ನು ಕೊಟ್ಟಿಗೆಯನ್ನು ಕಟ್ಟಿಹಾಕಲಾಗಿತ್ತು. ಜು.21ರ ಮುಂಜಾವ 3.30ಕ್ಕೆ ಸುಮಾರು 40 ಸಾವಿರ ರೂ. ಮೌಲ್ಯದ ದನ ಕಳವಾಗಿದ್ದನ್ನು ಅರಿತ ಅಶ್ವಿನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News