ಕಾವು: ಬುಶ್ರಾ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಪುತ್ತೂರು, ಆ.22: ಕಾವು ಬುಶ್ರಾ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಕಾರ್ಯಾಕಾರಿ ಸಮಿತಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಈ ವೇಳೆ 2022-23ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧಕ್ಷರಾಗಿ ಪಿ.ಎ.ಅಬ್ದುಲ್ ಖಾದರ್ ಹಿರಾ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯೋಪಾಧ್ಯಾಯ ಅಮರನಾಥ ಬಿ.ಪಿ., ಉಪಾಧ್ಯಕ್ಷರಾಗಿ ರವಿಪ್ರಸಾದ್ ಹಾಗೂ ಸಾಲಿಹ ಬಿ.ಕೆ., ಜೊತೆ ಕಾರ್ಯದರ್ಶಿಯಾಗಿ ಪ್ರಮೀಳಾ, ಕೋಶಾಧಿಕಾರಿಯಾಗಿ ಮೊಯ್ದಿನ್ ಕೌಡಿಚ್ಚಾರ್, ಶಿಕ್ಷಕ ಪ್ರತಿನಿಧಿಯಾಗಿ ದೀಪಿಕಾ ಚಾಕೋಟೆ ಆಯ್ಕೆಯಾದರು.
ಸಂಘಕ್ಕೆ ಪೋಷಕ ಪ್ರತಿನಿಧಿಗಳ ಆಯ್ಕೆ: ಶಿಕ್ಷಕ - ರಕ್ಷಕ ಸಂಘದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪೋಷಕ ಪ್ರತಿನಿಧಿಗಳಾಗಿ ಜಾಫರ್ ಎಂ.ಕೆ., ಯು.ಕೆ.ಇಬ್ರಾಹೀಂ, ಎಂ.ಲತೀಫ್, ಮುಹಮ್ಮದ್ ಎಂ., ಮಾಹಿನ್, ಎಸ್.ಕೆ.ಹಸೈನಾರ್, ಶಾಂತಪ್ಪ ಗೌಡ, ಲಿಂಗಪ್ಪ ಎನ್., ಧನುಶ್ ಗೌಡ, ಹರೀಶ್ ಗೌಡ, ದಿವ್ಯಾ, ಆಯಿಷತುಲ್ ಆಬಿದ, ಫಾತಿಮತ್ ಝೌರ, ತಾಹಿರ ಎ., ಪುಷ್ಪಾ ಬಿ., ನಯನಾ, ಶಾರದಾ, ಕೃತಿಕಾ, ಮೀನಾಕ್ಷಿ, ಕವಿತಾ ಕೆ., ಬಾಲಚಂದ್ರ ಬಾಲ್ಕಾಡಿ, ರವಿರಾಜ ಬೋರ್ಕರ್, ದಾಮೋದರ ಮಣಿಯಾನಿ, ಪ್ರಶಾಂತ್ ಎನ್.ಆರ್., ಅಬ್ದುಲ್ ಬಶೀರ್ ಬುಡಿಯಾರ್, ಖಲಂದರ್ ಶಾಫಿ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.