ರಾಣಿ ಪಿ.ಬಿ.ಗೆ ಡಾಕ್ಟರೇಟ್

Update: 2022-08-29 17:08 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯಕ್ಕೆ ರಾಣಿ ಪಿ.ಬಿ ಅವರು "ಆ್ಯನ್ ಇವ್ಯಾಲ್ಯುವೇಷನ್ ಆಫ್ ಜೆಂಡರ್ ಸೆನ್ಸಿಟಿವಿಟಿ ಇನ್ ಪರ್ಸಿವ್ಡ್ ಸ್ಟ್ರೆಸ್ ಅಂಡ್ ಸ್ಟ್ರೈನ್ ಆಫ್  ಎಂಪ್ಲೋಯೀಸ್ - ಎ ಡೈಯಾಗ್ನೋಸ್ಟಿಕ್ ಸ್ಟಡಿ  ಎಟ್ ನ್ಯೂ ಮ್ಯಾಂಗಲೋರ್ ಪೋರ್ಟ್ ಟ್ರಸ್ಟ್" ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. 

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ  ಪ್ರೊ.ಪಿ.ಎಸ್ ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ  ಪ್ರಬಂಧ ಮಂಡಿಸಿದ್ದರು.

ರಾಣಿ ಅವರು ಬಂಟ್ವಾಳ ತಾಲೂಕಿನ ಕಲ್ಲಗುಡ್ಡೆ ನಿವಾಸಿಯಾಗಿದ್ದ ದಿ.ಬಾಬು ಹೆಚ್.ಯಂ ಮತ್ತು ದಿ.ಚೆನ್ನಮ್ಮ ಪಿ.ಬಿ ದಂಪತಿಯ ಪುತ್ರಿ ಮತ್ತು ಪಣಂಬೂರು ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯ ಪ್ರೊಸೆಸ್ ಕಂಟ್ರೋಲ್ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ಆಗಿರುವ  ವಸಂತ ಕೌಕ್ರಾಡಿ ಇವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News