ಸೆ.4ರಂದು ಮಂಗಳೂರು ತಾಲೂಕು ಬಿಲ್ಲವ ಸಂಘ ಉದ್ಘಾಟನೆ

Update: 2022-08-29 17:54 GMT
ಬಿ.ಜನಾರ್ದನ ಪೂಜಾರಿ

ಮಂಗಳೂರು; ನೂತನವಾಗಿ ರಚನೆಯಾದ ಮಂಗಳೂರು ತಾಲೂಕು ಬಿಲ್ಲವ ಸಂಘ ವನ್ನು ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಮತ್ತು ವಸಂತ ಬಂಗೇರ ಉದ್ಘಾಟಿಸಲಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣ ನಾಥ ದೇವಸ್ಥಾನದ ಕೊರಗಪ್ಪ ಸ್ಮಾರಕ ಸಭಾಂಗಣದಲ್ಲಿ ಸೆ.4ರಂದು ಬೆಳಗ್ಗೆ 10ಗಂಟೆ ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆಯ ಸಚಿವ ಸುನಿಲ್ ಕುಮಾರ್ ,ಸಮಾಜ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀ ನಿವಾಸ ಪೂಜಾರಿ, ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್  ಹಾಗೂ ಶಾಸಕರು ಮಾಜಿ ಶಾಸಕ ರು,ಸಚಿವರು ಹಾಗೂ ಬಿಲ್ಲವ ಮುಖಂಡ ರು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಜಿತೇಂದ್ರ ಜೆ.ಸುವರ್ಣ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರು ತಾಲೂಕಿನ ಸುಮಾರು 60 ಬಿಲ್ಲವ ಸಂಘಗಳು ತಾಲೂಕು ಸಂಘದೊಂದಿಗೆ ಸಂಯೋಜನೆ ಹೊಂದಿದೆ. ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶದಂತೆ ಶಿಕ್ಷಣ, ಸಂಘಟನೆ ಯ ಮೂಲಕ ಸಮಾಜವನ್ನು ಸಶಕ್ತ ಗೊಳಿಸುವ ಉದ್ದೇಶ ದೊಂದಿಗೆ ರಾಜಕೀಯ ರಹಿತವಾಗಿ ಬಿಲ್ಲವ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ಜಿತೇಂದ್ರ ಸುವರ್ಣ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ರಂಜಾನ್ ಮಿಜಾರ್,ಉಪಾಧ್ಯಕ್ಷ ರಾದ ಸುರೇಶ್ ಚಂದ್ರ ಕೊಟ್ಯಾನ್,ಪಾರ್ವತಿ ಅಮೀನ್, ಪ್ರಧಾನ ಕಾರ್ಯದರ್ಶಿ ಲೋಕನಾಥ್ ಪೂಜಾರಿ, ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News