ಬಳ್ಳಾರಿಗೆ ಹೊರಟ ತ್ರಿವರ್ಣ ದ್ವಜಗಳ ಗಣಪ

Update: 2022-08-30 13:46 GMT

ಮಣಿಪಾಲ: ಸ್ವಾತಂತ್ರ್ಯದ 75 ವರ್ಷದ ನೆನಪಿಗಾಗಿ ಈ ಬಾರಿ ಮಣಿಪಾಲದ ಕಲಾವಿದರು ತ್ರಿವರ್ಣ ಧ್ವಜಗಳಿಂದ ಪರಿಸರ ಸ್ನೇಹಿ ಗಣೇಶನ ಕಲಾಕೃತಿ ರಚಿಸಿದ್ದಾರೆ.

ಮಣಿಪಾಲದ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು ಹಾಗೂ ರವಿ ಹಿರೇಬೆಟ್ಟು ಗಣೇಶನ ಈ ಅಪರೂಪದ ಕಲಾಕೃತಿಯನ್ನು ರಚಿಸಿದ್ದು, ಇದಕ್ಕಾಗಿ 1000ಕ್ಕೂ ಅಧಿಕ ಧ್ವಜಗಳನ್ನು ಹಾಗೂ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದ್ದಾರೆ.

ಈ ಕಲಾಕೃತಿ ಈಗ ಬಳ್ಳಾರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿನ ಮಾರ್ವಾಡಿ ದೇವಸ್ಥಾನ ಮುಖ್ಯರಸ್ತೆಯ ಕೌಲ್ ಬಜಾರ್‌ನಲ್ಲಿ ನಾಳೆಯಿಂದ ಪ್ರದರ್ಶನ ಗೊಳ್ಳಲಿದೆ ಎಂದು ಕಲಾವಿದರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News