×
Ad

ವಿಕಲಚೇತನರಿಗೆ ಟ್ರೈಸ್ಕೂಟರ್ -ವೀಲ್‌ಚೇರ್ ವಿತರಣೆ

Update: 2022-08-30 20:35 IST

ಉಡುಪಿ : 2021-22 ನೇ ಸಾಲಿನ ನಗರಸಭಾ ಅನುದಾನದ ಶೇ. 5ರ ನಿಧಿಯಡಿ 75 ಶೇಕಡಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಟ್ರೈಸ್ಕೂಟರ್ ಹಾಗೂ ವೀಲ್‌ಚೇರ್‌ಗಳನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ನಗರಸಭೆ ಆವರಣದಲ್ಲಿ ವಿತರಿಸಿದರು.

ಸೆಟ್ಟಿಬೆಟ್ಟು ವಾರ್ಡಿನ ರಾಘವೇಂದ್ರ ನಾಯ್ಕ್, ಪೆರಂಪಳ್ಳಿ ವಾರ್ಡಿನ ಅರೆಲ್ ಡಿಸೋಜಾ, ಒಳಕಾಡು ವಾರ್ಡಿನ ಬಿ.ಎಸ್.ಸುರೇಶ ಅವರಿಗೆ ಟ್ರೈಸ್ಕೂಟರ್ ಹಾಗೂ ಕಸ್ತೂರ್ಬಾ ನಗರ ವಾರ್ಡಿನ ಭಾಸ್ಕರ ಪೂಜಾರಿ ಅವರಿಗೆ ವೀಲ್ ಚೇರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪೌರಾಯುಕ್ತ ಉದಯ್ ಶೆಟ್ಟಿ ಹಾಗೂ ನಗರಸಭೆಯ ಸರ್ವ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News