ಜಾರ್ಖಂಡ್: ಶಾಸಕರ ಖರೀದಿ ಭೀತಿ; ಯುಪಿಎ ಶಾಸಕರು ರಾಯಪುರಕ್ಕೆ

Update: 2022-08-30 17:54 GMT

ರಾಂಚಿ, ಆ. 30: ಬಿಜೆಪಿಯಿಂದ ಶಾಸಕರ ಖರೀದಿಯನ್ನು ತಪ್ಪಿಸಲು ಜಾರ್ಖಂಡ್‌ನ ಯುಪಿಎ ತನ್ನ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ಚತ್ತೀಸ್‌ಗಢದ ರಾಯಪುರಕ್ಕೆ ಕರೆದೊಯ್ದಿದೆ. 

‘‘ನಾವು ಯಾವುದೇ ಸನ್ನಿವೇಶವನ್ನುಎದುರಿಸಲು ಸಿದ್ಧ. ಶಾಸಕರ ಖರೀದಿಯನ್ನು ನಿಭಾಯಿಸಲು ನಾವು ಎಲ್ಲ ಕಾರ್ಯತಂತ್ರವನ್ನು  ಸಿದ್ಧಗೊಳಿಸುತ್ತಿದ್ದೇವೆ’’ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ರಾಂಚಿ ವಿಮಾನ ನಿಲ್ದಾಣದ ಹೊರಗೆ  ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. 
‘‘ನೀವು ಈಗಾಗಲೇ ಕಾರ್ಯತಂತ್ರದ ನಿದರ್ಶನವನ್ನು ನೋಡಿದ್ದೀರಿ. ರಾಜ್ಯದಲ್ಲಿ ಪಿತೂರಿಗಾರರಿಗೆ ಆಡಳಿತರೂಡ ಸರಕಾರ ಸೂಕ್ತ ಪ್ರತಿಕ್ರಿಯೆ ನೀಡಲಿದೆ’’ ಎಂದು ಅವರು ಹೇಳಿದರು.

ಲಾಭದಾಯಕ ಹುದ್ದೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಪರಿಗಣಿಸಿ ಸೊರೇನ್ ಅವರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಗುರುವಾರ ಸಲಹೆ ನೀಡಿದ ಬಳಿಕ ಕಳೆದ ವಾರದಿಂದ ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News