ರಕ್ತದಾನಿಯ ಮನಸ್ಸು‌ ಮಗುವಿನ ಮನಸ್ಸಿನಂತೆ: ವಂ. ಫಾ. ಗಿಲ್ಬರ್ಟ್ ಡಿಸೋಜ

Update: 2022-09-04 14:47 GMT

ಮುಲ್ಕಿ, ಸೆ.4: ರಕ್ತದಾನ ಮಾಡುವ ಪ್ರತಿಯೊಬ್ಬ ದಾನಿಯ ಮನಸ್ಸು ಮಗುವಿನ ಮನಸ್ಸಿಗಿಂತ ಶ್ರೇಷ್ಠ. ಆ ಕಾರಣಕ್ಕಾಗಿ ಮುಗ್ದರನ್ನು ವಂಚಿಸದಿರಿ ಎಂದು ಸಂತ ಪೌಲರ ದೇವಾಲಯದ ಧರ್ಮ ಗುರು ವಂದನೀಯ ಫಾದರ್  ಗಿಲ್ಬರ್ಟ್ ಡಿಸೋಜ ಹೇಳಿದ್ದಾರೆ.

ಅವರು ಇಂದು  ಭೂ ಸಂತ್ರಸ್ತರ ಹಿತರಕ್ಷಣಾ ಸಮಿತಿ ಬಳ್ಕುಂಜೆ ಉಳೆಪಾಡಿ ಕೊಲ್ಲೂರು ಮತ್ತುಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಹಳೆ ವಿದ್ಯಾರ್ಥಿ ಸಂಘ ಕೊಲ್ಲೂರು, ಐ.ಸಿ.ವೈ.ಎಂ. ಬಳ್ಕುಂಜೆ, ವೈ.ಸಿ.ಎಸ್. ಬಳ್ಕುಂಜೆ, ಕ್ಯಾಥೋಲಿಕ್ ಸಭಾ ಬಳ್ಕುಂಜೆ, ಮುಹಿಯುದ್ದೀನ್ ಜುಮ್ಮಾ ಮಸೀದಿ ಕರ್ನಿರೆ, ವಿಠೋಭ ರಖುಮಾಯಿ ಭಜನಾ ಮಂದಿರ ಬಳ್ಕುಂಜೆ, ಯುವಕ ಮಂಡಲ ಉಳೆಪಾಡಿ, ರಿಕ್ಷಾ ಚಾಲಕ ಮಾಲಕರ ಸಂಘ(ರಿ)ಬಳ್ಕುಂಜೆ ಹಾಗೂ ಎಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಬಾಗಿತ್ವದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ 148ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ರೋಯಲ್ ಐ ಕೇರ್ ಅವರಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಪ್ರೇಮ್ ವಿತರಣೆ‌ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಬಳ್ಕುಂಜೆ ಚರ್ಚ್ ಹಾಲ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಬಳ್ಕುಂಜೆ ಗ್ರಾಮ ಪಂಚಾಯತ್ ಅದ್ಯಕ್ಷೆ ಮಮತಾ ಡಿ.ಪೂಂಜಾ, ಉಳ್ಳವರು ಇಲ್ಲದವರ ಬಗ್ಗೆ ಅರಿತು ಅವರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಇಲ್ಲದವರ ಕೈಗೆ ಮುಟ್ಟಿಸಬೇಕೆಂದದರು.

ವೇದಿಕೆಯಲ್ಲಿ  ಹಾಫಿಲ್ ಹನೀಫ್ ಸ'ಅದಿ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅದ್ಯಕ್ಷ ನಝೀರ್ ಹುಸೇನ್, ನಿವೃತ್ತ ಮುಖ್ಯ ಶಿಕ್ಷಕರಾದ ನಾಗಭೂಷಣ್ ರಾವ್, ಎ.ಜೆ. ಆಸ್ಪತ್ರೆ ರಕ್ತನಿಧಿ ವಿಭಾಗದ ಮುಖ್ಯಸ್ಥ ಗೋಪಾಲಕೃಷ್ಣ,  ಐ.ಸಿ.ವೈ.ಎಂ. ಸಂಸ್ಥೆಯ ಅಧ್ಯಕ್ಷೆ ಕೆರೋಲಿನ್ ಡಿಸೋಜ, ವೈ.ಸಿ.ಎಸ್ ಅಧ್ಯಕ್ಷೆ ಸೋನಿಯ ಡಿಸೋಜ, ಕಥೋಲಿಕ್ ಸಭಾ ಅದ್ಯಕ್ಷರಾದ ಮೆಲ್ರೀಡಾ ರೊಡ್ರೀಗಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ಡಾ. ಫ್ರೀಡಾ ರೊಡ್ರಿಗಸ್, ಕೊಲ್ಲೂರು ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಉಮೇಶ್ ನಾಯ್ಕ್, ವಿಠೋಭ ರಖುಮಾಯಿ ಭಜನಾ ಮಂದಿರ  ಬಲ್ಕುಂಜೆ ಇದರ ಅದ್ಯಕ್ಷ ದಯಾನಂದ ಶೆಟ್ಟಿ, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಶಿಬಿರದ ಉಸ್ತುವಾರಿಗಳಾದ  ಇಂತಿಯಾಝ್ ಬಜಪೆ, ಖಾದರ್ ಮಂಚೂರು, ಕೋಶಾಧಿಕಾರಿ ಸತ್ತಾರ್ ಪುತ್ತೂರು, ಜೊತೆ ಕಾರ್ಯದರ್ಶಿ ಬಶೀರ್ ಕೃಷ್ಣಾಪುರ, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ.ಸಿ. ರೋಡ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯ ನಿರ್ವಾಹಕರಾದ ರಾಫಿಝ್ ಕೃಷ್ಣಾಪುರ, ಅಶ್ರಫ್ ಮಂಚಿಲ, ಶಿಹಾನ್ ಪಡುಬಿದ್ರೆ, ನೌಫಲ್ ಇಫ್ತಿಕಾರ್, ಆಸೀಫ್ ಬಬ್ಬುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಭೂ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ  ಡಿಸೋಜ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಂಚಾಲಕರಾದ ಸಂಶುದ್ದೀನ್ ದೊಡ್ಡಕೆರೆ ಪ್ರಸ್ತಾವಣೆಗೈದರು. ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು. ಭೂ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯ ಸದಸ್ಯರಾದ ವಿನ್ಸೆಂಟ್ ಸಿಕ್ವೇರ  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News