ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2022-09-05 15:51 GMT

ಶಂಕರನಾರಾಯಣ, ಸೆ.5: ಮದ್ಯ ಸೇವನೆಯಿಂದ ಮಾನಸಿಕವಾಗಿ ಮನ ನೊಂದ ಅಂಪಾರು ಗ್ರಾಮದ ಗುಬ್ಯಾಡಿ ನಿವಾಸಿ ಪ್ರಭಾಕರ ಶೆಟ್ಟಿ(43) ಎಂಬವರು ಸೆ.4ರಂದು ಬೆಳಗ್ಗೆ ಮನೆಯ ಸಮೀಪ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ನಿಟ್ಟೆ ಗ್ರಾಮದ ಕಲ್ಲಂಬಾಡಿ ನಿವಾಸಿ ಪ್ರಭಾಕರ ಶೆಟ್ಟಿ (54) ಎಂಬವರು ಜೀವನದಲ್ಲಿ ನೊಂದು ಸೆ.4ರಂದು ರಾತ್ರಿ ವೇಳೆ ಮನೆಯ ಹೊರಗಿನ ಶೀಟ್‌ಔಟ್ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News