ಇಸ್ಪೀಟ್ ಜುಗಾರಿ: ನಾಲ್ವರ ಬಂಧನ

Update: 2022-09-10 15:38 GMT

ಕಾರ್ಕಳ, ಸೆ.10: ನಿಟ್ಟೆ ಗ್ರಾಮದ ಕೆಮ್ಮಣ್ಣು ಡ್ಯಾಮ್ ಬಳಿಯ ಕೆಪಿಟಿಸಿಎಲ್‌ನ ಪಾಳು ಬಿದ್ದ ಹಳೆಯ ಕಟ್ಟಡದಲ್ಲಿ ಸೆ.9ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಿಟ್ಟೆ ಗ್ರಾಮದ ಪರಪ್ಪಾಡಿಯ ಪ್ರಥಮ್ ಶೆಟ್ಟಿ (29), ಎರ್ಮುಂಜೆ ನಿವಾಸಿ ಸಂದೀಪ(29), ಮದನಾಡು ನಿವಾಸಿ ಗುರು ಪ್ರಸಾದ(23), ಸೂರಂಟೆದ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳು. ಬಂಧಿತರಿಂದ 1360ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News