ಸಂಪ್ಯದಲ್ಲಿ ಮುಅಲ್ಲಿಂ ಡೇ ಆಚರಣೆ

Update: 2022-09-11 16:09 GMT

ಪುತ್ತೂರು: ದಾರುಲ್ ಉಲೂಮ್ ಮದ್ರಸ ಸಂಪ್ಯ ಇದರ  ವತಿಯಿಂದ ಮುಅಲ್ಲಿಂ ಡೇ ಆಚರಣೆ ರವಿವಾರ ನಡೆಯಿತು.   ಸಂಪ್ಯ ಮಸೀದಿಯ ಆಡಳಿತ ಸಮಿತಿ  ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ  ದ್ವಜಹಾರೋಹಣ ನೆರವೇರಿಸಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಸೀದಿಯ ಖತೀಬ್  ಹಾಜಿ ಅಬ್ದುಲ್ ಹಮೀದ್  ಉಸ್ತಾದ್  ನೇತ್ರತ್ವದಲ್ಲಿ  ಕಬರ್ ಝಿಯಾರತ್ ಹಾಗೂ ದುಆ ನಡೆಯಿತು.

ಬಳಿಕ  ಮದ್ರಸ ಸಭಾಂಗಣದಲ್ಲಿ  ಇಸ್ಮಾಯಿಲ್ ಬೈಲಾಡಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು  ಹಮೀದ್ ದಾರಿಮಿ ಮಾಡಾವು ಉದ್ಘಾಟಿಸಿದರು. ಶರೀಫ್ ದಾರಿಮಿ ಮಾಡವು ಮುಖ್ಯ ಭಾಷಣ ಮಾಡಿದರು. ಅಝೀಝ್ ಉಸ್ತಾದ್ ಇಂದ್ರಾಜೆ ಅಶ್ರಫ್ ಮುಸ್ಲಿಯಾರ್ ಕೊರುಂಗಿಲ ಶುಭ ಹಾರೈಸಿದರು.

ಹಾಜಿ ಅಬ್ದುಲ್ ಹಮೀದ್ ದಾರಿಮಿ ಉಸ್ತಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಸ್ತಾಫ ಫೈಝಿ ಸವಣೂರು  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News