ಸುಳ್ಯ: ಇಲಿ ಜ್ವರಕ್ಕೆ ಯುವಕ ಬಲಿ
Update: 2022-09-11 16:21 GMT
ಸುಳ್ಯ: ಜಯನಗರ ನಿವಾಸಿ ಹಿರಿಯ ಆಟೋ ಚಾಲಕ ರಿಚರ್ಡ್ ಕ್ರಾಸ್ತಾ ಎಂಬವರ ಪುತ್ರ ಆಕರ್ಷ್ ಕ್ರಾಸ್ತ (35) ಶನಿವಾರ ನಿಧನರಾದರು.
ಅವರಿಗೆ ಕೆಲವು ದಿನಗಳ ಹಿಂದೆ ಜ್ವರ ಬಂದ ಹಿನ್ನೆಲೆಯಲ್ಲಿ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅವರಿಗೆ ಇಲಿಜ್ವರ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ತಿಳಿದುಬಂದಿದೆ.
ಮೃತರು ತಂದೆ, ತಾಯಿ, ಇಬ್ಬರು ಸಹೋದರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.