ವಿಟ್ಲ: ಜಾಗದ ತಕರಾರು; ತಮ್ಮನಿಂದ ಅಣ್ಣನ ಕೊಲೆ
Update: 2022-09-14 06:26 GMT
ಬಂಟ್ವಾಳ, ಸೆ.14: ಜಾಗದ ವಿಚಾರವಾಗಿ ಸಹೋದರರ ನಡುವಿನ ಗಲಾಟೆ ಓರ್ವನ ಹತ್ಯೆ(Murder) ಯಲ್ಲಿ ಪರ್ಯಾವಸನಗೊಂಡ ಘಟನೆ ತಾಲೂಕಿನ ವಿಟ್ಲ ಸಮೀಪದ ಕೊಡಂಗೆ ಎಂಬಲ್ಲಿ ನಡೆದಿದೆ.
ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಕೊಲೆಯಾದವರು. ಅವರ ತಮ್ಮ ಪದ್ಮನಾಭ (49) ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಅಣ್ಣ ತಮ್ಮಂದಿರ ನಡುವೆ ಜಾಗದ ವಿಚಾರವಾಗಿ ಹಲವು ಸಮಯದಿಂದ ತಕರಾರು ನಡೆಯುತ್ತಿತ್ತೆನ್ನಲಾಗಿದೆ. ಕುಡಿತದ ಚಟ ಹೊಂದಿರುವ ಇವರಿಬ್ಬರೊಳಗೆ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದು, ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಂಗಳವಾರ ರಾತ್ರಿಯೂ ಇವರೊಳಗೆ ನಡೆದ ಗಲಾಟೆಯಲ್ಲಿ ಗಣೇಶ ಕೊಲೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪುಣೆಯಲ್ಲಿ ರಸ್ತೆ ಅಪಘಾತ: ಮಂಗಳೂರು ಮೂಲದ ದಂತ ವೈದ್ಯೆ ಮೃತ್ಯು