ಕಡಿಯುತ್ತಿದ್ದ ಮರ ಬಿದ್ದು ಕೂಲಿ ಕಾರ್ಮಿಕ ಮೃತ್ಯು
Update: 2022-09-14 19:22 IST
ಉಡುಪಿ, ಸೆ.14: ಕಡಿಯುತ್ತಿದ್ದ ಮರ ತುಂಡಾಗಿ ಬಿದ್ದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಸೆ.13ರಂದು ಮಧ್ಯಾಹ್ನ ವೇಳೆ ನಗರದ ಕಲ್ಸಂಕ ಸಮೀಪ ನಡೆದಿದೆ.
ಮೃತರನ್ನು ಬಾಗಲಕೋಟೆಯ ಹುನಗುಂದ ತಾಲೂಕಿನ ಸುರೇಶ ಸಂದಿಮನಿ (32) ಎಂದು ಗುರುತಿಸಲಾಗಿದೆ. ಕಲ್ಸಂಕ ಬಳಿ ನಿಧಿ ಹೋಮ್ಸ್ ಎಂಬ ಮನೆಯ ಹಿಂಭಾಗದಲ್ಲಿರುವ ಜಾಗದಲ್ಲಿದ್ದ ಮರಗಳನ್ನು ಆರೋಪಿಗಳಾದ ಸುನೀಲ್ ಮತ್ತು ಜಾಗದ ಮಾಲಕ ಪ್ರಭಾಕರ ಸಾಲ್ಯಾನ್ ಯಾವುದೇ ಸುರಕ್ಷಾ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ ವಹಿಸಿ ಮರ ಕಡಿಸುತ್ತಿದ್ದರು.
ಸುರೇಶ ಸಂದಿಮನಿ ಕಡಿಯುತ್ತಿದ್ದ ಮರವು ತುಂಡಾಗಿ ಅವರ ಮೈಮೇಲೆ ಬಿದ್ದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಅಜ್ಜರಕಾಡು ಆಸ್ಪತ್ರೆಯಲ್ಲಿ ಮೃತಟ್ಟರು. ಆರೋಪಿಗಳ ನಿರ್ಲಕ್ಷತನವೇ ಸುರೇಶ ಸಂದಿಮನಿ ಸಾವಿಗೆ ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.