ಹೆಬ್ರಿಯಲ್ಲಿ ಸರಣಿ ಕಳ್ಳತನ: ಜ್ಯುವೆಲ್ಲರಿಗಳಿಂದ ಚಿನ್ನಾಭರಣ, ಬೆಳ್ಳಿ ಕಳವು

Update: 2022-09-14 15:30 GMT
ಸಾಂದರ್ಭಿಕ ಚಿತ್ರ

ಹೆಬ್ರಿ, ಸೆ.14: ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಜ್ಯುವೆಲ್ಲರಿ ಅಂಗಡಿಗಳಿಗೆ ಸೆ.13ರಂದು ರಾತ್ರಿ ನುಗ್ಗಿದ ದುಷ್ಕರ್ಮಿಗಳು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಹೆಬ್ರಿ ನೆಹರೂ ನಗರದ ಹರೀಶ ಹೆಗ್ಡೆ ಎಂಬವರ ಆಗುಂಬೆ -ಹೆಬ್ರಿ ರಸ್ತೆಯ ಬಳಿಯ ಗಣೇಶ ಜ್ಯುವೆಲ್ಲರ್ ಅಂಗಡಿಯ  ಶೆಟರ್ ಬೀಗ ಮುರಿದು ಒಳಗಡೆ ನುಗ್ಗಿದ ದುಷ್ಕರ್ಮಿಗಳು, 5 ಕೆ.ಜಿ. ಹೊಸ ಬೆಳ್ಳಿ ಹಾಗೂ ಒಂದು ಕೆ.ಜಿ ಹಳೆ ಬೆಳ್ಳಿ ಆಭರಣಗಳು, ಒಂದು ಪವನ್ ತೂಕದ 2 ಚಿನ್ನದ ಉಂಗುರಗಳನ್ನು ಕಳವು ಮಾಡಿದ್ದಾರೆ. ಇದ ಒಟ್ಟು ಮೌಲ್ಯ 3.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಅದೇ ರೀತಿ ಕುಚ್ಚೂರಿನ ರುದ್ರಯ್ಯ ಆಚಾರ್ಯ ಎಂಬವರ ಹೆಬ್ರಿ ಕುಚ್ಚೂರು ರಸ್ತೆಯಲ್ಲಿರು ಶ್ರೀರಾಜರಾಜೇಶ್ವರಿ ಜುವೆಲ್ಲರ್ ಅಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿದ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News