ಮಂಗಳೂರು ಜನತಾ ನ್ಯಾಯಾಲಯದ ಖಾಯಂ ಸದಸ್ಯ ರಾಗಿ ವಕೀಲ ಫಝ್ಲುಲ್ ರಹೀಂ ನೇಮಕ

Update: 2022-09-20 16:35 GMT

ಪುತ್ತೂರು: ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿ ಗೊಳಪಟ್ಟ ಮಂಗಳೂರು ಖಾಯಂ ಜನತಾ ನ್ಯಾಯಾಲಯದ ಸದಸ್ಯರಾಗಿ ಪುತ್ತೂರಿನ ನ್ಯಾಯವಾದಿ ಫಝ್ಲುಲ್ ರಹೀಂ ನೇಮಕಗೊಂಡಿದ್ದಾರೆ.

ಇವರ ಸದಸ್ಯ ‌ಅವಧಿ‌ ಮುಂದಿನ 5 ವರ್ಷಗಳ ತನಕ ಇರಲಿದೆ. ಫಝ್ಲುಲ್ ರಹೀಂ ಅವರು ಕಳೆದ 31 ವರ್ಷಗಳಿಂದ ಪುತ್ತೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯ ಸರ್ಕಾರ ಫಝ್ಲುಲ್ ರಹೀಂ ಅವರನ್ನು ನೇಮಕಗೊಳಿಸಿದೆ. ಸೆ.19ರಂದು ಅವರು ಅಧಿಕಾರ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News