ತ್ರಾಸಿ ಬೀಚ್ನಲ್ಲಿ ಡಾಲ್ಫಿನ್ ಕಳೇಬರ ಪತ್ತೆ
Update: 2022-09-21 18:37 IST
ಕುಂದಾಪುರ, ಸೆ.21: ಮರವಂತೆ ಸಮೀಪದ ತ್ರಾಸಿ ಕಡಲ ಕಿನಾರೆ ಬಳಿ ಕೊಳೆತ ಸ್ಥಿತಿಯಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ.
ಕೊಳೆತ ಕಾರಣ ದುರ್ನಾತ ಬೀರುತ್ತಿದ್ದ ಡಾಲ್ಫಿನ್ ಕಳೇಬರವನ್ನು ಸ್ಥಳೀಯ ಯುವಕರು ಗುಂಡಿ ತೋಡಿ ಹೂತರು. ಸ್ಥಳೀಯ ಯುವಕರಾದ ರಂಜನ್, ಮಹೇಶ್, ನಾಗರಾಜ್, ವೆಸ್ಟನ್, ಮಹೇಶ್ ಈ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.