ಕೋಟ: ನದಿಗೆ ಬಿದ್ದು ಯುವಕ ಮೃತ್ಯು

Update: 2022-09-22 15:22 GMT
ಸಾಂದರ್ಭಿಕ ಚಿತ್ರ

ಕೋಟ, ಸೆ.22: ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ.19ರಂದು ಮಧ್ಯಾಹ್ನ ವೇಳೆ ಆವರ್ಸೆ ಗ್ರಾಮದ ಕಿರಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ನಂಚಾರು ಗ್ರಾಮದ ಹೆಸ್ಕುಂದ ಉದಯ ನಾಯ್ಕ(35) ಎಂದು ಗುರುತಿಸಲಾಗಿದೆ. ಮನೆಯ ಹತ್ತಿರದ ಸೀತಾನದಿಗೆ ಮೀನು ಹಿಡಿಯಲು ಹೋಗಿದ್ದ ಇವರು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News