ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2022-09-26 15:42 GMT

ಅಜೆಕಾರು, ಸೆ.26: ವಿಪರೀತ ಮಧ್ಯಪಾನ ಅಭ್ಯಾಸ ಹೊಂದಿದ್ದ ಅಜೆಕಾರು ಅಡಿಂಜಾರು ನಿವಾಸಿ ಕೇಶವ ನಾಯಕ್ (65) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.25ರಂದು ಮಧ್ಯಾಹ್ನ ವೇಳೆ ಹಳೆಯ ಮನೆಯ ಕೋಣೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮಾನಸಿಕ ರೋಗದಿಂದ ಬಳಲುತ್ತಿದ್ದ ಕಾರ್ಕಳ ಪೆರ್ವಾಜೆ ರೋಡ್ ನಿವಾಸಿ ನಾರಾಯಣ ದೇವಾಡಿಗ (63) ಎಂಬವರು ಸೆ.25ರಂದು ಸಂಜೆ ವೇಳೆ ಮನೆಯ ಹೊರಗಡೆ ಮಾಡಿನ ಪಕಾಸ್ಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News