ದ.ಕ. : ಪಿಎಫ್‌ಐ ಮುಖಂಡರ ಬಿಡುಗಡೆ

Update: 2022-10-01 16:24 GMT

ಮಂಗಳೂರು, ಅ.1: ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದ ಬಳಿಕ ಮುಂಜಾಗೃತಾ ಕ್ರಮವಾಗಿ ಬಂಧಿಸಲ್ಪಟ್ಟ ದ.ಕ.ಜಿಲ್ಲೆಯ 14 ಮಂದಿ ಪಿಎಫ್‌ಐ ಮತ್ತು ಎಸ್‌ಡಿಪಿಐನ ಮುಖಂಡರು, ಕಾರ್ಯಕರ್ತರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪಾಂಡೇಶ್ವರ ರೈಲ್ವೆಗೇಟ್ ಸಮೀಪದ ಮುಹಮ್ಮದ್ ಶರೀಫ್, ಕುದ್ರೋಳಿಯ ಮುಝೈರ್ ಮತ್ತು ಮುಹಮ್ಮದ್ ನೌಫಾಲ್ ಹಂಝ, ತಲಪಾಡಿ ಕೆ.ಸಿ.ನಗರ ಪೂಮಣ್ಣು ನಿವಾಸಿ ಶಬೀರ್ ಅಹ್ಮದ್, ಉಳ್ಳಾಲ ಮಾಸ್ತಿಕಟ್ಟೆಯ ನವಾಝ್ ಉಳ್ಳಾಲ, ಉಳಾಯಿಬೆಟ್ಟುವಿನ ಮುಹಮ್ಮದ್ ಇಕ್ಬಾಲ್, ಚೊಕ್ಕಬೆಟ್ಟು-ಕೃಷ್ಣಾಪುರ 8ನೆ ಬ್ಲಾಕ್‌ನ ದಾವೂದ್ ನೌಶಾದ್, ಕಿನ್ನಿಪದವಿನ ಮುಹಮ್ಮದ್ ನಝೀರ್, ಬಜ್ಪೆ ಸಮೀಪದ ಕಿನ್ನಿಪದವಿನ ಇಸ್ಮಾಯೀಲ್ ಇಂಜಿನಿಯರ್, ಪುತ್ತಿಗೆ ಮುಂಡೇಲು ಮನೆಯ ಇಬ್ರಾಹೀಂ, ದ.ಕ.ಜಿಲ್ಲಾ ಎಸ್ಪಿ ವ್ಯಾಪ್ತಿಯ ಬಿ. ಮೂಡ ಗ್ರಾಮದ ರಾಝಿಕ್, ಫಿರೋಝ್, ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಜಾಬಿರ್ ಅರಿಯಡ್ಕ ಅವರನ್ನು ಬಂಧಿಸಲಾಗಿತ್ತು. ಇವರೆಲ್ಲರಿಗೂ ನ್ಯಾಯಾಲಯ ಜಾಮೀನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News