ಉತ್ತರ ಪ್ರದೇಶ: ಗದ್ದೆಯಲ್ಲಿ ಯುವತಿಯ ಮೃತದೇಹ ಪತ್ತೆ; ಅತ್ಯಾಚಾರ ಶಂಕೆ

Update: 2022-10-04 02:39 GMT
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶದ(Uttar Pradesh) ಔರಿಯಾ ಜಿಲ್ಲೆಯ ಸಿರಿ ಧಾನ್ಯ ಗದ್ದೆಯಲ್ಲಿ 17 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿದ್ದು, ಇದು ಅತ್ಯಾಚಾರ (Rape) ಮತ್ತು ಕೊಲೆ ಪ್ರಕರಣ ಎಂದು ಯುವತಿಯ ಕುಟುಂಬ ಆಪಾದಿಸಿದೆ.

ಈ ಘಟನೆ ಸೋಮವಾರ ಮುಂಜಾನೆ ನಡೆದಿದ್ದು, ವಿಶ್ರಾಂತಿಗಾಗಿ ಯುವತಿ ಗದ್ದೆಗೆ ಬಂದಿದ್ದಳು. ಆದರೆ ಮಧ್ಯಾಹ್ನ ಬಳಿಕವೂ ವಾಪಸ್ಸಾಗಲಿಲ್ಲ. ಬಳಿಕ ಸಿರಿ ಧಾನ್ಯ ಗದ್ದೆಯಲ್ಲಿ ಆಕೆಯ ಮೃತದೇಹ ಪೋಷಕರಿಗೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹದ ಮೇಲೆ ಯಾವುದೇ ಬಟ್ಟೆಗಳು ಇರಲಿಲ್ಲ. ಕೇವಲ ದುಪ್ಪಟವನ್ನು ಆಕೆಯ ಕುತ್ತಿಗೆಗೆ ಬಿಗಿಯಲಾಗಿತ್ತು. ಪುತ್ರಿಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಯುವತಿಯ ತಂದೆ ಆಪಾದಿಸಿದ್ದಾರೆ.

ಅಕ್ಕಪಕ್ಕದಲ್ಲಿ ಬೆಳೆಗಳು ನಾಶವಾಗಿದ್ದು, ಆಕೆಯನ್ನು ಹೊಲದಲ್ಲಿ 30-40 ಮೀಟರ್ ದೂರಕ್ಕೆ ಎಳೆಯಲಾಗಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಆದರೆ ಯುವತಿಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಇಲ್ಲ. ಆದಾಗ್ಯೂ ಎಲ್ಲ ಆಯಾಮದಿಂದ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಚಾರು ನಿಗಮ್ ಹೇಳಿದ್ದಾರೆ. ಯುವತಿಯ ಅಟಾಪ್ಸಿಯನ್ನು ಮೂವರು ವೈದ್ಯರ ತಂಡ ನಡೆಸಲಿದೆ. ಕಣ್ಗಾವಲು ಮತ್ತು ವಿಶೇಷ ಕಾರ್ಯಾಚರಣೆ ತಂಡ ಸೇರಿದಂತೆ 10 ತಂಡಗಳು ಪ್ರಕರಣದ ವಇಚಾರದಲ್ಲಿ ಕಾರ್ಯೋನ್ಮುಖವಾಗಿವೆ. ಯಾರ ವಿರುದ್ಧವೂ ಕುಟುಂಬ ಸಂಶಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರಾಮಸ್ಥರು ಮತ್ತು ಕುಟುಂಬದವರ ಪ್ರತಿಭಟನೆಯ ನಡುವೆಯೂ ಪೊಲೀಸರು ಯುವತಿಯ ದೇಹವನ್ನು ಬಲವಂತದಿಂದ ವಶಕ್ಕೆ ಪಡೆದಿದ್ದಾರೆ ಎಂದು ಪ್ರತ್ಯಕ್ಷದಶಿಗಳು ದೂರಿದ್ದಾರೆ.

ಇದನ್ನೂ ಓದಿ: ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವುದು ಹಕ್ಕಲ್ಲ: ಸುಪ್ರೀಂಕೋರ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News