ಮೀಲಾದ್ ಅಭಿಯಾನ ಯಶಸ್ವಿಗೆ ಜಂಇಯ್ಯತುಲ್ ಖುತ್ಬಾ ಕರೆ

Update: 2022-10-04 13:51 GMT

ಮಂಗಳೂರು, ಅ.4: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧೀನ ಸಂಘಟನೆಗಳಾದ ಎಸ್‌ವೈಎಸ್,  ಎಸ್‌ಕೆಎಸ್‌ಎಸ್ ಎಫ್, ಎಸ್‌ಕೆಎಸ್‌ಬಿವಿ ಜಿಲ್ಲಾ ಸಮಿತಿಗಳ ವತಿಯಿಂದ ಮಿಲಾದ್ ಪ್ರಯುಕ್ತ ಜಿಲ್ಲಾದ್ಯಂತ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಸಮಸ್ತ ಜಂ ಇಯ್ಯತುಲ್ ಖುತ್ಬಾ ದ.ಕ. ಜಿಲ್ಲಾ ಸಮಿತಿ ಕರೆ ನೀಡಿದೆ.

ಇತ್ತೀಚೆಗೆ ಸಮಸ್ತ ಮಹಲ್‌ನಲ್ಲಿ ನಡೆದ ಜಂ ಇಯ್ಯತುಲ್ ಖುತಬಾ ಜಿಲ್ಲಾ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಖುತ್ಬಾದ ಅಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಜಂಇಯ್ಯತುಲ್ ಖುತ್ಬಾ ಕೇಂದ್ರ ಸಮಿತಿ ಕಾರ್ಯದರ್ಶಿ ಹಮೀದ್ ದಾರಿಮಿ ಸಂಪ್ಯ ಸಭೆಯನ್ನು ಉದ್ಘಾಟಿಸಿದರು. ರೌಲತುಲ್ ಇಲ್ಮ್ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಖುತ್ಬಾ ಕೋಶಾಧಿಕಾರಿ ಹಂಝತುಸ್ಸಅದಿ ನೆರವೇರಿಸಿದರು.

ಸಭೆಯಲ್ಲಿ ಪುತ್ತೂರು ವಲಯಾಧ್ಯಕ್ಷ ಹಬೀಬುರ‌್ರಹ್ಮಾನ್ ತಂಙಳ್ ಮುಕ್ವೆ, ಬಂಟ್ವಾಳ ವಲಯಾಧ್ಯಕ್ಷ ಅನಸ್ ತಂಙಳ್ ಕರ್ವೇಲು, ಕಡಬ ವಲಯಾಧ್ಯಕ್ಷ ಜುನೈದ್ ಜಿಫ್ರೀ ತಂಙಳ್ ಆತೂರು, ಬೆಳ್ತಂಗಡಿ ವಲಯಾಧ್ಯಕ್ಷ ಅಕ್ರಂ ಅಲಿ ತಂಙಳ್ ರಹ್ಮಾನಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ರಶೀದ್ ರಹ್ಮಾನಿ ಪರ್ಲಡ್ಕ ಸ್ವಾಗತಿಸಿದರು. ವರ್ಕಿಂಗ್ ಕಾರ್ಯದರ್ಶಿ ರಶೀದ್ ಯಮಾನಿ ಕಡಬ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News