ಮಂಗಳೂರು | ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷರಾಗಿ ಸುಪ್ರೀತ್ ಆಳ್ವ ಆಯ್ಕೆ

Update: 2022-10-05 07:15 GMT

ಮಂಗಳೂರು, ಅ.5: ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಸುಪ್ರೀತ್ ಆಳ್ವ ಮತ್ತು ಕಾರ್ಯದರ್ಶಿಯಾಗಿ ದೀಪಕ್ ಕುಮಾರ್ ಆಯ್ಕೆಯಾಗಿದ್ದಾರೆ.

ಅಸೋಸಿಯೇಶನ್ ನ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಅ.3ರಂದು ಅಶೋಕ್ ಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ 2022-23ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಹುಸೈನ್(ನೂರ್), ಸೈಮನ್ ಲೋಬೊ, ಜೊತೆ ಕಾರ್ಯದರ್ಶಿಯಾಗಿ ಡಾ.ಶರತ್ ಕುಮಾರ್ ಕೆ., ಕೋಶಾಧಿಕಾರಿಯಾಗಿ ಲಕ್ಷ್ಮೀ ಪಿ. ಸುವರ್ಣ, ಕ್ರೀಡಾ ಸಮಿತಿಯ ಮೇಲ್ವಿಚಾರಕರಾಗಿ ಟೆರೆನ್ಸ್ ಅಜಯ್, ಅಭಿವೃದ್ಧಿ ಸಮಿತಿಯ ಮೇಲ್ವಿಚಾರಕರಾಗಿ ಸಂತೋಷ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಸಿ.ಎಸ್.ಭಂಡಾರಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಬ್ದುಲ್ ಖಾದರ್ ನಿಯಾಝ್, ಅಶೋಕ್ ಕುಮಾರ್ ಹೆಗ್ಡೆ, ರಿಯಾಝ್ ಎ. ಹಸನ್, ಅನಿಲ್ ರಾವ್ ಬಿ.ಎಸ್., ದೇವದಾಸ್ ಆರ್ಕೋಟ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News