ಉಳ್ಳಾಲ: ಮಿಲಾದುನ್ನಬಿ ಪ್ರಯುಕ್ತ ಪ್ರವಾದಿ ಸಂದೇಶ ಜಾಥಾ

Update: 2022-10-09 06:49 GMT

ಉಳ್ಳಾಲ: ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಆಯೋಜಿಸಿದ ಬೃಹತ್ ಮೀಲಾದ್ ಕಾಲ್ನಾಡಿಗೆ ಜಾಥಾ, ಹಝ್ರತ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ (ರ) ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಅಳೇಕಲ, ಮಂಚಿಲ, ತೊಕ್ಕೊಟ್ಟು, ಟಿ.ಸಿ.ರೋಡ್, ಅಕ್ಕರೆಕೆರೆ, ಮಾಸ್ತಿಕಟ್ಟೆ, ಮೇಲಂಗಡಿ ಮಾರ್ಗವಾಗಿ ಸಾಗಿ, ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ವಲಿಯುಲ್ಲಾಹಿ ದರ್ಗಾ(ಉಳ್ಳಾಲ)ದಲ್ಲಿ ಸಮಾಪ್ತಿಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಂ.ಒ. ಇದರ ಅಧ್ಯಕ್ಷರಾದ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ವಹಿಸಿದ್ದರು.‌ ರಾಜ್ಯ ವಿಪಕ್ಷ ಉಪ ನಾಯಕ, ಶಾಸಕ ಯು ಟಿ ಖಾದರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಾಂಬಿ ಉಸ್ತಾದ್, ಪಟ್ಲ ಫೈಝಿ ಉಸ್ತಾದ್, ಹಾಜಿ ಯುಎಸ್ ಹಂಝ ಸಹಿತ ಹಲವಾರು ಉಲಮಾ, ಉಮರಾ ಗಣ್ಯರು, ವಿವಿಧ ಮೊಹಲ್ಲಾಗಳ ಪದಾಧಿಕಾರಿಗಳು, ಎಸ್.ಜೆ.ಎಂ. ಪದಾಧಿಕಾರಿಗಳು, ಎಸ್ ವೈಎಸ್, ಎಸ್ ಎಸ್ ಎಫ್ ಪದಾಧಿಕಾರಿಗಳು, ಕಾರ್ಯಕರ್ತರು, ಮದ್ರಸಾ ಅಧ್ಯಾಪಕರುಗಳು, ರಾಜಕೀಯ ನಾಯಕರುಗಳು, ವಿವಿಧ ಮದ್ರಸಗಳ ದಫ್ ತಂಡ, ಮದ್ರಸ ವಿದ್ಯಾರ್ಥಿಗಳು, ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News