×
Ad

‘ದೂರದೃಷ್ಟಿಯ ಕನಸುಗಾರ-ಹಾಜಿ ಎಂ.ಪಿ. ಇಸ್ಮಾಯಿಲಬ್ಬ ಪಾರೆ’ ಪುಸ್ತಕ ಬಿಡುಗಡೆ

Update: 2022-10-22 20:19 IST

ಮಂಗಳೂರು : ಮೇಲ್ತೆನೆ (ಬ್ಯಾರಿ ಲೇಖಕರು-ಕಲಾವಿದರ ಕೂಟ) ದೇರಳಕಟ್ಟೆ ಇದರ ವತಿಯಿಂದ ‘ಪಾರೆ ಕುಟುಂಬಸ್ಥರ’ ಸಹಯೋಗದಲ್ಲಿ ‘ದೂರದೃಷ್ಟಿಯ ಕನಸುಗಾರ-ಹಾಜಿ ಎಂ.ಪಿ. ಇಸ್ಮಾಯಿಲಬ್ಬ ಪಾರೆ’ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ದೇರಳಕಟ್ಟೆಯ ಹೊಟೇಲ್ ಅತಿಥಿ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಕೃತಿಯನ್ನು ಬಿಡುಗಡೆಗೊಳಿಸಿ ದುಆ ಅಶೀರ್ವಚನ ನೀಡಿದ ಹಿರಿಯ ಧಾರ್ಮಿಕ ವಿದ್ವ್ವಾಂಸ ಅಲ್ಹಾಜ್ ಕೆ.ಎಸ್. ಆಟಕೋಯ ತಂಳ್ ಕುಂಬೋಳ್ ‘ಜೀವಿತಾವಧಿಯಲ್ಲಿ ನಾವು ಒಳ್ಳೆಯ ಕೆಲಸ-ಕಾರ್ಯಗಳನ್ನು ಮಾಡಿದರೆ, ಜಾತಿ, ಧರ್ಮ ಎಂಬುದನ್ನು ಪರಿಗಣಿಸದೆ ಸೇವೆ ಸಲ್ಲಿಸಿದರೆ ನಮ್ಮನ್ನೆಲ್ಲರೂ ಪ್ರೀತಿಸುತ್ತಾರೆ ಎಂಬುದಕ್ಕೆ  ಸರ್ವಧರ್ಮೀಯರ ಈ ಸಂಗಮವು ಸಾಕ್ಷಿಯಾಗಿದೆ’ ಎಂದು ಹೇಳಿದರು.

ಪಾರೆ ಕುಟುಂಬದ ಹಿರಿಯ ಸದಸ್ಯ ಅಬೂಸ್ವಾಲಿಹ್ ಹಾಜಿ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂಞಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಶನ್ ಅಧ್ಯಕ್ಷ ಡಾ.ಕುಂಞಾಲಿ ಕೂಡಲ್ ಕಾರ್ಯಕ್ರಮ ಉದ್ಘಾಟಿಸಿದರು.

ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹೈದರ್ ಪರ್ತಿಪ್ಪಾಡಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ್, ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋಹನ್ ದಾಸ್ ಶೆಟ್ಟಿ ಕಿನ್ಯ, ಪ್ರಗತಿಪರ ಕೃಷಿಕ ಗದಾಧರ ಮಲ್ಲಾರ ಮಾತನಾಡಿದರು.

ಮೋರ್ಲಗುತ್ತು ಚಂದ್ರಹಾಸ ಶೆಟ್ಟಿ, ಮುರಳೀಧರ ಶೆಟ್ಟಿ, ಕೆ.ಎಸ್.ಇಸ್ಮಾಯೀಲ್ ಹಾಜಿ ಕಿನ್ಯ, ಪಾರೆ ಕುಟುಂಬದ ಸದಸ್ಯರಾದ ಇಬ್ರಾಹಿಂ ನಾಯರ್‌ಮೂಲೆ, ಪಿ.ಎ.ಮುಹಮ್ಮದ್ ಅಲಿ, ಅಬ್ದುಲ್ ಜಲೀಲ್, ಡಾ.ಉಮರ್ ನಾಯರ್‌ಮೂಲೆ, ಇಬಾಹೀಂ (ಇಂಬಾನಿಚ್ಚ) ನೂತಿಲ, ಹನೀಫ್ ನ್ಯೂ ಮುಟ್ಟಾಜೆ, ಮುಹಮ್ಮದ್ ಪಾರೆ, ಮುಹಮ್ಮದ್ ಕುರಿಯ, ಮುಹಮ್ಮದ್ ನೂತಿಲ, ಅಬ್ದುಲ್ ರಝಾಕ್ ಬಾಚಲಿಗೆ, ಅಬೂಸಾಲಿಹ್ ಹಾಜಿ ಕುರಿಯಕ್ಕಾರ್, ಅಝೀಝ್ ಬದನಮೂಲೆ, ಇಬ್ರಾಹೀಂ ಕುಂಞಿ ಪಾರೆ, ಸಿದ್ದೀಕ್ ಪಾರೆ, ಅಬ್ದುಲ್ ಹಮೀದ್ ಪಾರೆ, ಮೇಲ್ತೆನೆಯ ಅಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್, ಪದಾಧಿಕಾರಿಗಳಾದ ಮನ್ಸೂರ್ ಅಹ್ಮದ್ ಸಾಮಣಿಗೆ, ಬಶೀರ್ ಕಲ್ಕಟ್ಟ, ಬಶೀರ್ ಅಹ್ಮದ್ ಕಿನ್ಯ, ಮಂಗಳೂರ ರಿಯಾಝ್, ಅಶೀರುದ್ದೀನ್ ಸಾರ್ತಬೈಲ್, ಬಿ.ಎಂ.ಕಿನ್ಯ, ಸಿದ್ದೀಕ್ ಎಸ್. ರಾಝ್ ಉಪಸ್ಥಿತರಿದ್ದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಸ್ವಾಗತಿಸಿದರು. ಉಸ್ಮಾನ್ ಝುಹ್ರಿ ಪಾರೆ ಕಿರಾಅತ್ ಪಠಿಸಿದರು. ಕೃತಿಯ ಲೇಖಕ ಹಂಝ ಮಲಾರ್‌ರನ್ನು ಸನ್ಮಾನಿಸಲಾಯಿತು. ಮೇಲ್ತೆನೆಯ ಕೋಶಾಧಿಕಾರಿ ಇಸ್ಮಾಯಿಲ್ ಟಿ. ಮಾಸ್ಟರ್ ಸನ್ಮಾನ ಪತ್ರ ವಾಚಿಸಿದರು. ಅಬ್ದುಲ್ಲಾ ಪಾರೆ ವಂದಿಸಿದರು. ಹೈದರ್ ಕೈರಂಗಳ ಮತ್ತು ಹಮೀದ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News