ಸಂತೆಕಟ್ಟೆ ಹಿಮಾಯತುಲ್‌ ಇಸ್ಲಾಮ್ ಜುಮಾ ಮಸೀದಿಯಿಂದ ಮೀಲಾದ್ ಕಾರ್ಯಕ್ರಮ

Update: 2022-10-24 14:29 GMT

ಹಳೆಯಂಗಡಿ, ಅ.24: ಹೊಸಂಗಡಿ ಕದಿಕೆ ಜುಮಾ‌ಮಸೀದಿಗೆ ಒಳಪಟ್ಟಿರುವ ಹಿಮಾಯತುಲ್‌ ಇಸ್ಲಾಂ ಜುಮಾ ಮಸೀದಿ ಸಂತೆಕಟ್ಟೆಇದರ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮೌಲೂದ್ ಪಾರಾಯಣ, ಮಕ್ಕಳ ಮೀಲಾದ್ ಕಾರ್ಯಕ್ರಮ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ರವಿವಾರ ಮಸೀದಿಯ ವಠಾರದಲ್ಲಿ ನಡೆಯಿತು.

ಬೆಳಗ್ಗೆ ನಡೆದ ಮೌಲೂದ್ ಪಾರಾಯಣದ ಮತ್ತು ದುಆ ನೇತೃತ್ವವನ್ನು ಶೈಖುನಾ ಅಲ್ಹಾಜ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ವಹಿಸಿದ್ದರು.

ಸಂಜೆ ಮಕ್ಕಳ ಪ್ರತಿಭಾ ಕಾರ್ಯಕ್ರಮ ನಡೆಯಿತು. ಮಗ್ರಿಬ್ ನಮಾಝಿನ ಬಳಿಕ ಧಾರ್ಮಿಕ ಪ್ರವಚನ ಕಾರ್ಯಕ್ರಮ‌ ಮತ್ತು ಪ್ರತಿಭಾ ಕಾರ್ಯಕ್ರಮದ ವಿಜೇತರಿಗೆ ಬಹಿಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಸಮಾರಂಭವನ್ನು ಹಳೆಯಂಗಡಿ ಕೇಂದ್ರ ಜುಮಾ‌ ಮಸೀದಿಯ ಖತೀಬ್ ಪಿ.ಎ. ಅಬ್ದುಲ್ಲಾ ಝೈನಿ, ಬಡಗನ್ನೂರು ಉದ್ಘಾಟಿಸಿದರು. ಮುಖ್ಯ ಪ್ರಭಾಷಣವನ್ನು ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿಯ ಖತೀಬ್ ಕೆ.ಎಂ. ಅಬೂಬಕರ್ ಮದನಿ ವಹಿಸಿದ್ದರು.

ಸಮಾರಂಭದಲ್ಲಿ ಇಮಾಯತುಲ್ ಇಸ್ಲಾಂ ಮದರಸ ಸಂತೆಕಟ್ಟೆಯ ಮುಅಲ್ಲಿಂ ಅಬ್ದುಲ್ ರಶೀದ್ ಮುಸ್ಲಿಯಾರ್, ಮೌಲಾನಾ ಮುಹ್ಮದ್ ಹನೀಫ್ ಝಿಯಾಹಿ, ರಫೀಕ್ ಅಬ್ದುಲ್ ರಹೀಂ ಗುಂಡಿ, ಕೇಂದ್ರ ಜುನಾ ಮಸೀದಿ ಕದಿಕೆ ಹಳೆಯಂಗಡಿಯ ಅಧ್ಯಕ್ಷರಾದ ಅಬ್ದುಲ್‌ಖಾದರ್ ಕಜಕತೋಟ ಸಾಗ್, ಕಾರ್ಯದರ್ಶಿ ಎಚ್. ಕೆ. ಮುಹಮ್ಮದ್ , ಇಮಾಯತುಲ್‌ಇಸ್ಲಾಂ ಜುಮಾ‌ಮಸೀದಿ ಸಂತೆಕಟ್ಟೆಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಪಡುತೋಟ, ಕಾರ್ಯದರ್ಶಿ ಎಂ.ಎಚ್.‌ ಇಲ್ಯಾಸ್ ಕಜಕತೋಟ, ಮುಸ್ಲಿಂ ಜಮಾಅತ್ ಒಕ್ಕೂಟ ಹಳೆಯಂಗಡಿ ವಲಯ ಅಧ್ಯಕ್ಷ ಕೆ. ಸಾಹುಲ್ ಹಮೀದ್‌ ಕದಿಕೆ, ಬದ್ರಿಯಾ ಜುಮಾ ಮಸೀದಿ ಸಾಗ್ ಇದರ‌ ಅಧ್ಯಕ್ಷರಾದ ಹಾಜಿ ಅಬ್ದುಲ್‌ ರಹ್ಮಾನ್ ಕುಡುಂಬೂರು, ಖಿಲ್ರಿಯಾ ಮಸರದ ಸಮಿತಿ ಇಂದಿರಾನಗರ ಇದರ ಅಧ್ಯಕ್ಷ ಯೂಸುಫ್‌ ಇಂದಿರಾನಗರ, ನೂರುಲ್ ಹುದಾ ಮದರಸ ಕದಿಕೆ ಇದರ ಅಧ್ಯಕ್ಷ ಸಿದ್ದೀಕ್ ಕದಿಕೆ, ಅಂಜುಮಾನದ ಇಸ್ಲಾಹುಲ್ ಮುಸ್ಲಿಮೀನ್ ಸಂತೆಕಟ್ಟೆ ಇದರ ಕಾರ್ಯದರ್ಶಿ ಕಮಲುದ್ದೀನ್ ಸಂತೆಕಟ್ಟೆ ಮೊದಲಾದವರು ಉಪದ್ಥಿತರಿದ್ದರು.

ಮುಹಮ್ಮದ್ ಅಶ್ರಫ್  ಪಡುತೊಟ ಸ್ವಾಗತಿಸಿದರು. ಬದ್ರಿಯಾ ಜುಮಾ‌ ಮಸೀದಿ ಸಾಗ್ ಇದರ ಖತೀಬ್ ಇ.ಎಂ.‌ಅಬ್ದುಲ್ಲಾ ಮದನಿ,  ಖಿಲ್ ರಿಯಾ ಮದರಸ ಇಂದಿರಾ ನಗರ ಇದರ ಸದರ್ ಮುಅಲ್ಲಿಮ್ ಇಮ್ರಾನ್‌ ಮಖ್ದೂಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News