ದೇರಳಕಟ್ಟೆ: ಕಲೋತ್ಸವ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ

Update: 2022-10-25 06:26 GMT

ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ಶಾಖೆಯ ವತಿಯಿಂದ ಕಲೋತ್ಸವ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯು ಎಸ್ಕೆಎಸ್ಸೆಸ್ಸೆಫ್‌ ಕ್ಯಾಂಪಸ್ ವಿಂಗ್ ದೇರಳಕಟ್ಟೆ ಶಾಖೆ ಅಧ್ಯಕ್ಷ ಮೊಹಮ್ಮದ್ ಆಶಿಕ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.

ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಉದ್ಘಾಟಿಸಿದರು.

ಬದ್ರಿಯಾ ಜುಮಾ ಮಸೀದಿ ಖತೀಬ್  ಇಸ್ಹಾಖ್ ಫೈಝಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಆರ್ ಅಹ್ಮದ್ ಶೇಟ್ ಹಾಯಾತುಲ್ ಇಸ್ಲಾಂ ಮದರಸ ಸದರ್ ಅಬ್ದುಲ್ಲಾ ಫೈಝಿ, ಬದ್ಯಾರ್ ಸಂಶುಲ್ ಉಲಮಾ ಮದರಸ ಸದರ್ ಇಬ್ರಾಹಿಂ ಫೈಝಿ, ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ದೇರಳಕಟ್ಟೆ ಹಾಯಾತುಲ್ ಇಸ್ಲಾಂ ಮದರಸ ಮುಅಲ್ಲಿಮರಾದ ಜಲಾಲ್ ಮುಸ್ಲಿಯಾರ್,ಸತ್ತಾರ್ ಇರ್ಫಾನಿ, ದೇರಳಕಟ್ಟೆ ಎಸ್.ವೈ.ಎಸ್ ನೇತಾರರಾದ ಮೊಹಮ್ಮದ್ ನಡುಪದವು, ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಫೈಝಲ್ ಡಿ.ಎಂ, ಉಪಾಧ್ಯಕ್ಷ ಮೊಹಮ್ಮದ್ ಯಾಕೂಬ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಂಶಿದ್, ಕೋಶಾಧಿಕಾರಿ ಮೊಹಮ್ಮದ್ ಇರ್ಫಾನ್,  ಉಳ್ಳಾಲ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಹರ್ಷಾದ್, ಎಸ್ಕೆಎಸ್ಸೆಸ್ಸೆಫ್‌ ಕ್ಯಾಂಪಸ್ ವಿಂಗ್ ದೇರಳಕಟ್ಟೆ ವಲಯ ಸಮಿತಿ ಚೆಯರ್ಮ್ಯಾನ್ ಮುಝಮ್ಮಿಲ್ ಎಚ್.ಆರ್ ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿದರು. ಕ್ಯಾಂಪಸ್ ವಿಂಗ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಶಮೀಮ್ ಧನ್ಯವಾದ ಸಮರ್ಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News