ಬೆಳ್ಳಾರೆ: ಗೌರಿಹೊಳೆ ಜನತಾ ಕಾಲನಿಯಲ್ಲಿ ಮಾಹಿತಿ ಕಾರ್ಯಾಗಾರ

Update: 2022-10-25 13:36 GMT

ಬೆಳ್ಳಾರೆ: ಬೆಳ್ಳಾರೆ ಗ್ರಾಮದ ಗೌರಿಹೊಳೆ ಜನತಾ ಕಾಲನಿಯಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ವತಿಯಿಂದ ಮಾಹಿತಿ ಕಾರ್ಯಾಗಾರ ಹಾಗೂ ಸಭೆ ಮಂಗಳವಾರ ನಡೆಯಿತು.

ಮಾಹಿತಿ ಕಾರ್ಯಾಗಾರದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಹಾಸ್ ಹಾಗೂ ಕ್ರೈಂ ಎಸೈ ಆನಂದ ಮಾತನಾಡಿ, ದಲಿತರಿಗೆ ಸಿಗುವ ಸೌಲಭ್ಯಗಳು, ರಸ್ತೆ ಸುರಕ್ಷತೆ, ಪೋಕ್ಸೋ ಪ್ರಕರಣ, ಮದ್ಯಪಾನ ದುಷ್ಪರಿಣಾಮದ ಬಗ್ಗೆ ಅರಿವು, ವಿದ್ಯಾಭ್ಯಾಸ, ಎಸ್ ಸಿ, ಎಸ್ ಟಿ ಕಾಯ್ದೆ, ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ಹಾಗೂ ಒಂಟಿಯಾಗಿ ಮನೆಯಲ್ಲಿ ವಾಸವಾಗಿರುವಾಗ ಜಾಗರೂಕತೆಯಿಂದ ಇರುವಂತೆ ಸೂಚಿಸಲಾಯಿತು. ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಆನಂದ ಬೆಳ್ಳಾರೆ ,ಕಾಲನಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News