ಪ್ರತಿಭಾ ಕುಳಾಯಿ ಬಗ್ಗೆ ಮಾನಹಾನಿ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಮನವಿ
ಮಂಗಳೂರು, ಅ. 27: ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿಯವರ ಬಗ್ಗೆ ಮಾನಹಾನಿಕರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ತೋರುತ್ತಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಬಿಲ್ಲವ ಸಮಾಜದ ನಿಯೋಗ ಇಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.
ಶ್ಯಾಮ್ ಸುದರ್ಶನ್ ಭಟ್ ಎಂಬಾತ ಫೇಸ್ ಬುಕ್ ನಲ್ಲಿ ಪ್ರತಿಭಟನೆ ನಿರತ ಫೋಟೋ ಹಾಕಿ ಮಾನಹಾನಿ ಮಾಡುವ ಉದ್ದೇಶದ ಅನಾಗರಿಕ ಲೈಂಗಿಕ ಸಂಜ್ಞೆ ಉಳ್ಳ ಮೆಸೇಜ್ನ್ನು ಹಾಕಿದ್ದು, ಇದು ಮಹಿಳಾ ಸಮುದಾಯಕ್ಕೆ ಅವಮಾನ ಮಾಡುವಂತದ್ದಾಗಿದೆ. ಅಭಿಪ್ರಾಯ ಬೇಧಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯಕ್ತ ಪಡಿಸುವ ಅವಕಾಶ ಇರುವಾಗ ಈ ರೀತಿಯ ವರ್ತನೆ ಸರಿಯಲ್ಲ. ರಾಜಕೀಯವಾಗಿ ಪ್ರಬಲ ಬೆಂಬಲ ಇರುವ ಆರೋಪಿ ಯನ್ನು ಪೊಲೀಸರು ಘಟನೆ ನಡೆದು ಒಂದು ವಾರ ಕಳೆದರೂ ಬಂದಿಸಿಲ್ಲ. ಇನ್ನು ಹೀಗೆಯೇ ವಿಳಂಬ ನೀತಿ ಅನುಸರಿಸಿದರೆ ಸಮಾಜದ ಪ್ರತಿಯೊಬ್ಬರನ್ನು ಸೇರಿಸಿಕೊಂಡು ನ್ಯಾಯಕ್ಕಾಗಿ ತೀವ್ರ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ತಲೆ ಮರೆಸಿ ಕೊಂಡಿರುವ ಆರೋಪಿಯನ್ನು ಕೂಡಲೇ ಬಂದಿಸ ಬೇಕು, ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾಜದ ಸ್ವಾಸ್ಥ ಕೆಡಿಸುವ ಆರೋಪಿಯ ಮೇಲೆ ಕಾನೂನು ಕ್ರಮಗಳನ್ನು ಕೈ ಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಗುರು ಬೆಳದಿಂಗಳು ಅಧ್ಯಕ್ಷರು ಪದ್ಮರಾಜ್ ಆರ್., ಗುರು ಚಾರಿಟೆಬಲ್ ಟ್ರಸ್ಟ್ನ ನಿಕಟ ಪೂರ್ವ ಅಧ್ಯಕ, ಶೈಲೇಂದ್ರ ವೈ ಸುವರ್ಣ, ಗೆಜ್ಜೆಗಿರಿ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ ಬಿಲ್ಲವ ಸಂಘ ಮತುತಿ ಯುವ ಸಂಘಟನೆ ಗಳ ಪ್ರಮುಖರು ಗಳಾದ ಪದ್ಮನಾಭ ಕೋಟ್ಯಾನ್, ಹರೀಶ್ ಕೆ ಪೂಜಾರಿ, ರಾಜೇಂದ್ರ ಚಿಲಿಂಬಿ, ದೀಪಕ್ ಪೆರ್ಮುದೆ, ಆನಂದ ಅಮೀನ್ ಕಾಟಿಪಳ್ಳ, ಗೋಪಾಲ ಬಂಗೇರ ಕುಳಾಯಿ, ರಂಜಿತ್ ಕುಮಾರ್, ಉಮೇಶ್ ಕೋಟ್ಯಾನ್, ಭರತೇಶ್ ಕಂಕನಾಡಿ, ವೇಣುಗೋಪಾಲ ಕೊಲ್ಯ, ಪ್ರಥ್ವಿರಾಜ್ ಉಜ್ಜೋಡಿ, ಯತೀಶ್ ಕುಮಾರ್ ಕೊಲ್ಯ, ರಾಜೇಶ್ ಕುಳಾಯಿ,ರವಿರಾಜ್ ದಂಬೆಲ್, ನೀಲಯ್ಯ ಪೂಜಾರಿ ಉಪಸ್ಥಿತರಿದ್ದರು.