ಬೊಳ್ಳಾಯಿ: ಅ.5ರಂದು ತಾಜುಲ್ ಉಲಮಾ ಅನುಸ್ಮರಣೆ
Update: 2022-11-02 12:14 IST
ಬಂಟ್ವಾಳ, ಅ.2: ಎಸ್.ವೈ.ಎಸ್. ಮತ್ತು ಎಸ್ಸೆಸ್ಸೆಫ್ ಬೊಳ್ಳಾಯಿ ಘಟಕದ ಆಶ್ರಯದಲ್ಲಿ ಅ.5ರಂದು ತಾಜುಲ್ ಉಲಮಾ ಅನುಸ್ಮಾರಣೆ ಕಾರ್ಯಕ್ರಮ ಬೊಳ್ಳಾಯಿ ಜಂಕ್ಷನ್ ನಲ್ಲಿ ನಡೆಯಲಿದೆ.
ಸೈಯದ್ ಮುಶ್ತಾಕ್ ರಹ್ಮಾನ್ ತಂಙಳ್ ಚಟ್ಟೆಕಲ್ ಕಾರ್ಯಕ್ರಮ ಉದ್ಘಾಟಿಸುವರು. ಎಸ್.ವೈ.ಎಸ್. ಅಧ್ಯಕ್ಷ ಖಾಸಿಂ ಮದನಿ ಅಧ್ಯಕ್ಷತೆ ವಹಿಸುವರು.
ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಸಂದೇಶ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.