ಧರಣಿನಿರತರಿಗೆ ಹಣ್ಣು, ತರಕಾರಿಗಳನ್ನು ಹೊತ್ತು ತಂದ ಮಲೆಕುಡಿಯರು

ಸುರತ್ಕಲ್‌ ಟೋಲ್‌ ಗೇಟ್‌ ತೆರವಿಗೆ ಆಗ್ರಹ

Update: 2022-11-03 06:46 GMT

ಸುರತ್ಕಲ್‌, ನ.3: ಇಲ್ಲಿನ ಸುರತ್ಕಲ್‌ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಟೋಲ್‌ ಗೇಟ್‌ ತೆರವಿಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದೆ.

ಇಂದು ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಕುದುರೆಮುಖ ಅಭಯಾರಣ್ಯ ಬೆಳ್ತಂಗಡಿಯ ಕುತ್ಲೂರು ಕಾಡಿನಂಚಿನಲ್ಲಿ ವಾಸಿಸುವ ಮಲೆಕುಡಿಯ ಜನಾಂಗದ ಪ್ರಮುಖರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ಜೊತೆ ತಾವು ಬೆಳೆದ ಹಣ್ಣು, ತರಕಾರಿಗಳನ್ನು ಹೊತ್ತು ತಂದು ಧರಣಿನಿರತರಿಗೆ ಹಸ್ತಾಂತರಿಸಿದರು.

Similar News