ವಂದೇ ಭಾರತ ರೈಲು ಢಿಕ್ಕಿ; ಮಹಿಳೆ ಸಾವು

Update: 2022-11-08 18:26 GMT

ಅಹ್ಮದಾಬಾದ್, ನ.8: ಗುಜರಾತಿನ ಆನಂದ ರೈಲು ನಿಲ್ದಾಣದ ಸಮೀಪ ಮಂಗಳವಾರ ಸಂಜೆ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಹಳಿಗಳನ್ನು ದಾಟುತ್ತಿದ್ದ ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಅಹ್ಮದಾಬಾದ್ ನಿವಾಸಿಯಾಗಿದ್ದ ಮಹಿಳೆ ಆನಂದ್‌ನಲ್ಲಿಯ ಬಂಧುಗಳ ಭೇಟಿಗೆ ತೆರಳಿದ್ದಳು.

ರೈಲು ಗಾಂಧಿನಗರದಿಂದ ಮುಂಬೈಗೆ ಸಂಚರಿಸುತ್ತಿತ್ತು. ಕಳೆದ ತಿಂಗಳು ಮೂರು ಸಂದರ್ಭಗಳಲ್ಲಿ ಜಾನುವಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಂದೇ ಭಾರತ ರೈಲು ಹಾನಿಗೀಡಾಗಿತ್ತು.

Similar News