ಸುಕೇಶ್ ಚಂದ್ರಶೇಖರ್ ನನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು: ಅರವಿಂದ ಕೇಜ್ರಿವಾಲ್

Update: 2022-11-12 10:14 GMT

ಹೊಸದಿಲ್ಲಿ: ಬಿಜೆಪಿ ಭಾಷೆಯಲ್ಲಿಯೇ ಮಾತನಾಡುತ್ತಿರುವ ಸುಕೇಶ್ ಚಂದ್ರಶೇಖರ್  ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ Delhi Chief Minister Arvind Kejriwal ಶನಿವಾರ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, "ಬಿಜೆಪಿ,  ಚಂದ್ರಶೇಖರ್ ನನ್ನು ಸ್ಟಾರ್ ಪ್ರಚಾರಕರಾಗಿ ತನ್ನ ತೆಕ್ಕೆಗೆ ತಂದಿದೆ. ಬಿಜೆಪಿ ನನ್ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒತ್ತಾಯಿಸುತ್ತಿದೆ ಹಾಗೂ ಸುಕೇಶ್ ಚಂದ್ರಶೇಖರ್ ಕೂಡ ಅದೇ ಬೇಡಿಕೆಯನ್ನು ಇಟ್ಟಿದ್ದಾನೆ.  ಇಬ್ಬರೂ ಒಂದೇ ರೀತಿ ಮಾತನಾಡುತ್ತಿದ್ದಾರೆ. ಈಗ ಬಿಜೆಪಿಗೆ ಸೇರಲು ಆತ ಸಂಪೂರ್ಣವಾಗಿ ತರಬೇತಿ ಪಡೆದಿದ್ದಾನೆ" ಎಂದು ಹೇಳಿದರು.

"ಪ್ರಧಾನಿ ಮೋದಿಯವರ ರೋಡ್‌ಶೋಗಳು ಜನರನ್ನು ಸೆಳೆಯುತ್ತಿಲ್ಲ ಎಂದು ನಾನು ಕೇಳಿದ್ದೇನೆ, ಅವರು ಆ ರೋಡ್‌ಶೋಗಳಿಗೆ ಸುಕೇಶ್ ಚಂದ್ರಶೇಖರ್ ನನ್ನು ಕರೆತರಬೇಕು. ಜನರನ್ನು ಹೇಗೆ ವಂಚಿಸಿದ್ದೇನೆಂಬ ಕುರಿತು ಆತನ  ಬಳಿ ಹಲವು  ಕಥೆಗಳಿವೆ.  ಜನರು ಆತನ ಕಥೆಗಳನ್ನು ವೀಕ್ಷಿಸಲು ಹಾಗೂ  ಕೇಳಲು ಬರುತ್ತಾರೆ. ನಿಜವಾಗಿಯೂ ಆತನನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು'' ಎಂದು ಕೇಜ್ರಿವಾಲ್ ಹೇಳಿದರು.

ಸುಕೇಶ್ ಚಂದ್ರಶೇಖರ್ 200 ಕೋ.ರೂ. ಸುಲಿಗೆ ಪ್ರಕರಣದಲ್ಲಿ ದಿಲ್ಲಿ ಪೊಲೀಸರಿಂದ ಬಂದಿಸಲ್ಪಟ್ಟಿದ್ದಾನೆ.

Similar News