ರಾಷ್ಟ್ರೀಯ ಲೋಕ ಅದಾಲತ್: ದ.ಕ.ಜಿಲ್ಲೆಯಲ್ಲಿ 22,262 ಪ್ರಕರಣಗಳು ಇತ್ಯರ್ಥ

Update: 2022-11-12 16:02 GMT

ಮಂಗಳೂರು, ನ.12: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ದ.ಕ. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ  22,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ರಾಜಿಯಾಗಬಲ್ಲ 31,791 ಪ್ರಕರಣಗಳನ್ನು ಕೈಗೆತ್ತಿಕೊಂಡು ಮಾತುಕತೆ ನಡೆಸಲಾಯಿತು. ಆ ಪೈಕಿ 22,262 ಪ್ರಕರಣಗಳಲ್ಲಿ 17,39,46,414 ರೂ. ಮೊತ್ತವನ್ನು ಇತ್ಯರ್ಥಪಡಿಸಲಾಯಿತು. ಇದರಲ್ಲಿ ಚೆಕ್ ಅಮಾನ್ಯ, ಸಿವಿಲ್ ಪ್ರಕರಣ, ಎಂಎಂಆರ್‌ಡಿ ಕಾಯ್ದೆ, ಬ್ಯಾಂಕ್ ಹಣ ವಸೂಲಾತಿ ಇತ್ಯಾದಿ ಪ್ರಕರಣಗಳು ಸೇರಿವೆ ಎಂದು ತಿಳಿಸಿದೆ.

Similar News