ನ.17ರಂದು ಶ್ರೀನಿವಾಸ್ ಕಾಲೇಜಿನಲ್ಲಿ 'ಸ್ಕಿಲ್ ಅಪ್ ವಿಥ್ ಬಡೆಕ್ಕಿಲ ಪ್ರದೀಪ್' ಕಾರ್ಯಾಗಾರ

Update: 2022-11-12 17:21 GMT

ಮಂಗಳೂರು: ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ & ಹ್ಯೂಮಾಮಿಟಿಸ್ ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸುತ್ತಿರುವ 'ಸ್ಕಿಲ್ ಅಪ್ ವಿಥ್ ಬಡೆಕ್ಕಿಲ ಪ್ರದೀಪ್' ಒಂದು ದಿನದ ಕಾರ್ಯಗಾರವು ನ.17ರಂದು ಹೋಟೆಲ್ ಶ್ರೀನಿವಾಸದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ಬಿಗ್ ಬಾಸ್, ಮೆಟ್ರೋ ಧ್ವನಿ ಖ್ಯಾತಿಯ ಬಡೆಕ್ಕಿಲ ಪ್ರದೀಪ್, ಚಾನ್ಸಲರ್ ಡಾ. ಸಿಎ ಎ. ರಾಘವೇಂದ್ರ ರಾವ್, ಪ್ರೊ. ಚಾನ್ಸಲರ್ ಡಾ. ಎ. ಶ್ರೀನಿವಾಸ ರಾವ್, ವೈಸ್ ಚಾನ್ಸಲರ್ ಡಾ.ಪಿ.ಎಸ್ ಐತಾಳ್, ಡೀನ್ ಡಾ. ಲವೀನಾ ಡಿಮೆಲ್ಲೋ ಸೇರಿ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ಪ್ರೋ. ಶ್ರೀರಾಜ್ ಎಸ್. ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News