ಪಶ್ಚಿಮ ವಲಯ ನೂತನ ಐಜಿಪಿಯಾಗಿ ಡಾ. ಚಂದ್ರಗುಪ್ತ ನೇಮಕ
Update: 2022-11-14 16:44 GMT
ಮಂಗಳೂರು, ನ.14: ಪಶ್ಚಿಮ ವಲಯ (ಮಂಗಳೂರು) ನೂತನ ಐಜಿಪಿಯಾಗಿ ಡಾ.ಚಂದ್ರಗುಪ್ತ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
2006ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಚಂದ್ರಗುಪ್ತ ಈವರೆಗೆ ಮೈಸೂರು ನಗರದ ಪೊಲೀಸ್ ಆಯುಕ್ತರು ಹಾಗೂ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈವರೆಗೆ ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೇವಜ್ಯೋತಿ ರೇ ಅವರನ್ನು ಮಾನವ ಹಕ್ಕುಗಳು ಮತ್ತು ಕುಂದು ಕೊರತೆ ವಿಭಾಗದ ಐಜಿಪಿಯಾಗಿ ನೇಮಕಗೊಳಿಸಲಾಗಿದೆ.