ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

ಕಲಾ ಶಿಕ್ಷಕ ಮಂಜುನಾಥ್ ಬಂಗ್ಲೆಗುಡ್ಡೆಗೆ ಸನ್ಮಾನ

Update: 2022-11-15 18:26 GMT

ಸುಳ್ಯ: 'ಪಠ್ಯ ಚಟುವಟಿಕೆಗಳೊಂದಿಗೆ ಇತರ  ಸಾಂಸ್ಕೃತಿಕ  ಚಟುವಟಿಕೆಗಳಿಗೆ  ಪ್ರೋತ್ಸಾಹ ದೊರೆತಾಗ ಮಾತ್ರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಸುಳ್ಯ ನಗರ  ಪಂಚಾಯತ್ ಸದಸ್ಯ ಕೆ. ಎಸ್. ಉಮರ್ ಹೇಳಿದ್ದಾರೆ.

ಗ್ರೀನ್ ವ್ಯೂ ಶಿಕ್ಷಣ  ಸಂಸ್ಥೆಯಲ್ಲಿ ಜಿಲ್ಲಾ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ  ಕಲಾ  ಶಿಕ್ಷಕ  ಮಂಜು ಬಂಗ್ಲೆಗುಡ್ಡೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ಶಿಕ್ಷಣ  ಸಂಸ್ಥೆ ಯ  ಅಧ್ಯಕ್ಷ  ಮಜೀದ್ ಜನತಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ  ಸಂಸ್ಥೆಗಳ  ಒಕ್ಕೂಟದ  ಉಪಾಧ್ಯಕ್ಷ  ಕೆ. ಎಂ. ಮುಸ್ತಫ ಬಾಗವಹಿಸಿದ್ದರು.

ವೇದಿಕೆಯಲ್ಲಿ  ಕಾರ್ಯದರ್ಶಿ ಲತೀಫ್   ಹರ್ಲಡ್ಕ, ಸಂಚಾಲಕ ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕ ಶಾಫಿ  ಕುತ್ತಮೊಟ್ಟೆ ಮುಖ್ಯ ಶಿಕ್ಷಕ ರಹೀಮ್ ಕಕ್ಕಿಂಜೆ ವಿದ್ಯಾರ್ಥಿ ಸಂಘದ ನಾಯಕ  ಫವಾಝ್,  ಉಪ  ನಾಯಕ  ಅಯಾಝ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ರಂಜಿತ್ ಸ್ವಾಗತಿಸಿ, ಫಾತೀಮ ಖಾಥೂನ್  ವಂದಿಸಿದರು, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮ ಜರಗಿತು.

Similar News