ನ.26: ದ.ಕ.ಜಿಲ್ಲಾ ವಕ್ಫ್ನಿಂದ ಜಮಾಅತ್ ಅದಾಲತ್
Update: 2022-11-25 13:13 GMT
ಮಂಗಳೂರು, ನ.25: ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಜಿಲ್ಲಾ ವಕ್ಫ್ಗೆ ನೋಂದಾಯಿಸಲ್ಪಟ್ಟ ಸುಮಾರು ಒಂದು ಸಾವಿರದಷ್ಟು ಮಸೀದಿ ಮದ್ರಸಗಳ ಪ್ರತಿನಿಧಿಗಳಿಗಾಗಿ ‘ಜಮಾಅತ್ ಅದಾಲತ್-ವಕ್ಫ್ ಸೌಲಭ್ಯ’ಗಳ ಮಾಹಿತಿ ಶಿಬಿರವು ನ.26ರ ಬೆಳಗ್ಗೆ 9:30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಪ್ರತೀ ಮಸೀದಿಯ ಖತೀಬ್, ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಇಬ್ಬರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ವಕ್ಫ್ನಿಂದ ಜಮಾಅತ್ಗೆ ನೀಡುವ ಸೌಲಭ್ಯ ಹಾಗೂ ವಿವಿಧ ಯೋಜನೆಯ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.