ಸುಳ್ಯ: ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣ; ಆರೋಪಿ ಸೆರೆ

Update: 2022-11-26 12:18 GMT

ಸುಳ್ಯ: ಇಲ್ಲಿನ ಬೀರಮಂಗಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು ಪಶ್ಚಿಮ ಬಂಗಾಲದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ಇಟ್ಟು ಪರಾರಿಯಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ, ಇಮ್ರಾನ್ ತನ್ನ ಊರಿಗೆ ಹೋಗಿದ್ದು ಅಲ್ಲಿಯ ಪೋಲೀಸರ ಸಹಾಯ ಪಡೆದು ಸುಳ್ಯ ಪೋಲೀಸರು ಇಮ್ರಾನ್ ನನ್ನು ಬಂಧಿಸಿ ನ.24ರಂದು ಸಂಜೆ ಸುಳ್ಯಕ್ಕೆ ಕರೆ ತಂದಿರುವುದಾಗಿ ತಿಳಿದು ಬಂದಿದೆ.

Similar News