​ಉಪ್ಪಿನಂಗಡಿ: ಎಟಿಎಂ ಹಣ ಸಾಗಾಟದ ವಾಹನ ಢಿಕ್ಕಿ; ಆಟೊರಿಕ್ಷಾ ಚಾಲಕ ಸ್ಥಳದಲ್ಲೇ ಮೃತ್ಯು

Update: 2022-11-29 12:49 GMT

ಉಪ್ಪಿನಂಗಡಿ, ನ. 29: ಎಟಿಎಂ ಹಣ ಸಾಗಾಟದ ವಾಹನ ಢಿಕ್ಕಿಯಾದ ಪರಿಣಾಮ ಆಟೊರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಇಂದು ಸಂಜೆ ನಡೆದಿದೆ.

34 ನೆಕ್ಕಿಲಾಡಿ ಗ್ರಾಮದ ಸುಭಾಶ್ ನಗರ ನಿವಾಸಿ ವಾಸು ಪೂಜಾರಿ (50 ) ಮೃತ ಆಟೊರಿಕ್ಷಾ ಚಾಲಕ.

ಇವರು ಉಪ್ಪಿನಂಗಡಿ ಕಡೆಗೆ ಆಟೊರಿಕ್ಷಾದಲ್ಲಿ ಬರುತ್ತಿದ್ದ ಸಂದರ್ಭ ಉಪ್ಪಿನಂಗಡಿಯಿಂದ ಬಿ.ಸಿ.ರೋಡು ಕಡೆಗೆ ಹೋಗುತ್ತಿದ್ದ ಎಟಿಎಂ ಹಣ ಸಾಗಾಟದ ವಾಹನ ಇವರ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಗಂಭೀರ ಗಾಯಗೊಂಡ ವಾಸು ಪೂಜಾರಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Similar News