ಮಧುಮೇಹ -ಅಂಗಾಗದಾನದ ಬಗ್ಗೆ ಮಾಹಿತಿ ಶಿಬಿರ

Update: 2022-11-29 13:29 GMT

ಉಡುಪಿ: ರಾಷ್ಟ್ರೀಯ ಅಂಗಾಗ ದಾನ ದಿನಾಚಣೆಯ ಅಂಗವಾಗಿ ಐಎಂಎ ಉಡುಪಿ ಕರಾವಳಿ ಮತ್ತು ಬ್ರಹ್ಮಾವರ ಲಯನ್ಸ್ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ಜನಸಾಮಾನ್ಯರಿಗೆ ಮಧುಮೇಹ ಮತ್ತು ಅಂಗಾಗದಾನದ ಬಗ್ಗೆ ಮಾಹಿತಿ ಮತ್ತು ತಪಾಸಣಾ ಶಿಬಿರ ಹಾಗೂ ವಿಶ್ವ ಮಧುಮೇಹ ದಿನಾಚರಣೆಯ ಸಮಾರೋಪ ಸಮಾರಂಭವು ಉಡುಪಿ ಐಎಂಎ ಭವನದಲ್ಲಿ ರವಿವಾರ ಜರಗಿತು.

ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಅಶೋಕ್ ಕುಮಾರ್ ವೈ.ಜಿ. ಉದ್ಘಾಟಿಸಿ ಮಧುಮೇಹದ ಶೀಘ್ರ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯ ಮಹತ್ವ ವನ್ನು ವಿವರಿಸಿದರು. ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಉಮೇಶ್ ನಾಯಕ್,  ಜಿಲ್ಲಾ ದೃಷ್ಟಿ ರಕ್ಷಣಾ ಕೇಂದ್ರದ ವಾದಿರಾಜ್ ರಾವ್ ಮುಖ್ಯ ಅಥಿತಿಯಾಗಿದ್ದರು.

ಅಧ್ಯಕ್ಷತೆಯನ್ನು ಐಎಂಎ ಉಪಾಧ್ಯಕ್ಷ ಡಾ.ರಾಜಲಕ್ಷ್ಮೀ ವಹಿಸಿದ್ದರು. ಮಣಿಪಾಲ ಕೆಎಂಸಿ ನರರೋಗ ಶಸ್ತ್ರ ಚಿಕಿತ್ಸಕ ಡಾ.ಗಿರೀಶ್ ಮೇನನ್, ನೇತ್ರ ತಜ್ಞೆ ಡಾ.ಸುಲತಾ ಭಂಡಾರಿ ಅಂಗಾಗ ದಾನದ ಮಹತ್ವದ ಬಗ್ಗೆ ವಿವರಿಸಿದರು.

ಮಧುಮೇಹ ತಜ್ಞ ಡಾ.ಶ್ರುತಿ ಬಲ್ಲಾಳ್, ಗೈನೊಕೊಲೊಜಿಸ್ಟ್ ಡಾ.ರಾಜಲಕ್ಷ್ಮೀ, ಗೆಸ್ಟ್ರೋಎನ್ಟ್ರೋಲೊಜಿಸ್ಟ್ ಡಾ.ಸತೀಶ್ ನಾಯಕ್, ಫಿಸೀಶಿಯನ್ ಡಾ.ವಿಜಯ್ ಶೇಟ್, ಎಲುಬು ತಜ್ಞ ಡಾ.ಅರ್ಜುನ್ ಬಲ್ಲಾಳ್, ಮನೋ ತಜ್ಞ ಡಾ.ಮಾನಸ್,  ಫೀಸಿಯೋ ಥೆೆರಪೀಸ್ಟ್ ಡಾ.ಸ್ನೇಹ ಆಚಾರ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

Similar News