ಗಂಗೊಳ್ಳಿ: ಬೋಟಿನಿಂದ ನದಿಗೆ ಬಿದ್ದು ಮೀನುಗಾರ ನಾಪತ್ತೆ
Update: 2022-12-01 15:45 GMT
ಗಂಗೊಳ್ಳಿ: ಗಂಗೊಳ್ಳಿ ಬಂದರು ಬಳಿ ಬೋಟಿನಿಂದ ಮೀನು ಖಾಲಿ ಮಾಡುತ್ತಿದ್ದಾಗ ಮೀನುಗಾರರೊಬ್ಬರು ನದಿಯ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ನ.30ರಂದು ರಾತ್ರಿ ವೇಳೆ ನಡೆದಿದೆ.
ನಾಪತ್ತೆಯಾದವರನ್ನು ಪ್ರಮೋದ ಮಿನ್ಜ್ (32) ಎಂದು ಗುರುತಿಸಲಾಗಿದೆ.
ಪ್ರಭಾಕರ ಖಾರ್ವಿ ಎಂಬವರ ಶ್ರೀಯಕ್ಷೇಶ್ವರಿ ಬೋಟು ಆಳ ಸಮುದ್ರದ ಮೀನುಗಾರಿಕೆ ಮಾಡಿ ವಾಪಾಸ್ಸು ಗಂಗೊಳ್ಳಿ ಬಂದರಿಗೆ ಬಂದಿದ್ದು, ಅಲ್ಲಿ ಪಂಚ ಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ ಮೀನನ್ನು ಖಾಲಿ ಮಾಡಲಾಗುತ್ತಿತ್ತು. ಈ ವೇಳೆ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದ್ ಆಕಸ್ಮಿಕವಾಗಿ ಆಯಾ ತಪ್ಪಿ ನದಿಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.