ಬ್ರಹ್ಮಾವರ: ಕಲ್ಲುಕೊರೆಯ ನೀರಿಗೆ ಬಿದ್ದು ರಿಕ್ಷಾ ಚಾಲಕ ಮೃತ್ಯು
Update: 2022-12-01 15:44 GMT
ಬ್ರಹ್ಮಾವರ, ಡಿ.1: ಕಲ್ಲುಕೋರೆಯ ನೀರಿನಲ್ಲಿರುವ ಮೀನುಗಳಿಗೆ ಆಹಾರವನ್ನು ಹಾಕುವಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನ.೩೦ರಂದು ಸಂಜೆ ವೇಳೆ ಯಡ್ತಾಡಿ ಗ್ರಾಮದ ಕೊಡ್ಲಿ ರಸ್ತೆ ಎಂಬಲ್ಲಿ ನಡೆದಿದೆ.
ಮೃತರನ್ನು ಗರಿಕೆಮಠದ ರಿಕ್ಷಾ ಚಾಲಕ ಸಂತೋಷ ಶೆಟ್ಟಿ(49) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ಕಲ್ಲುಕೋರೆಯಲ್ಲಿ ಮೀನಿಗೆ ಆಹಾರ ಹಾಕುತ್ತಿದ್ದಾಗ ಅಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಇದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇವರ ಮೃತದೇಹವು ಡಿ.೧ರಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.