ಮಂಗಳೂರು: ಶ್ರೀರಾಮ್ ಫೈನಾನ್ಸ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

Update: 2022-12-05 15:25 GMT

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ 4,800 ಸರಕಾರಿ ಶಾಲೆಗಳು, 2000 ಸರಕಾರಿ ಅನುದಾನಿತ ಶಾಲೆಗಳು, 2500ಕ್ಕೂ ಅಧಿಕ  ಖಾಸಗಿ ಶಾಲೆಗಳಿವೆ. ಗೃಹ ಇಲಾಖೆಯ ಬಳಿಕ, ಶಿಕ್ಷಣ ಇಲಾಖೆಗೆ ಆಯವ್ಯಯದಲ್ಲಿ ಅನುದಾನ ಬಳಕೆಯಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಬೇಕು ಎಂದು ಕುಟುಂಬ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶ್ರಿರಾಮ್ ಮೋಟಾರ್ ಫೈನಾನ್ಸ್ ಕಂಪೆನಿಯ ವತಿಯಿಂದ ದ.ಕ. ಜಿಲ್ಲೆಯ 835 ವಿದ್ಯಾರ್ಥಿಗಳಿಗೆ 28 ಲಕ್ಷ ರೂ.ವಿದ್ಯಾರ್ಥಿ ನಿಧಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮ್ ಫೈನಾನ್ಸ್‌ನ ಅಸಿಸ್ಟೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಸುದರ್ಶನ್ ಬಿ ಹೊಳ್ಳ ವಿಧ್ಯಾರ್ಥಿ ವೇತನ ವಿತರಣೆಗೆ ಚಾಲನೆ ನೀಡಿದರು.

ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್, ಮಂಗಳೂರು ಮನಪಾ ಮೇಯರ್ ಜಯನಾಂದ ಅಂಚನ್, ಶ್ರೀ ರಾಮ್‌ನ ವಲಯ ಬ್ಯುಸಿನಸ್ ಮುಖ್ಯಸ್ಥ ಶರಶ್ಚಂದ್ರ ಭಟ್ ಕಾಕುಂಜೆ, ಮೈಸೂರ್ ಇಲೆಕ್ಟ್ರಿಕಲ್ಸ್‌ನ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮುಡಿಪು ಶಾರದಾ ಗಣಪತಿ ಶಾಲೆಯ ಸಂಚಾಲಕ ಟಿ.ಜಿ ರಾಜಾರಮ್ ಭಟ್, ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಚಂದ್ರಕುಮಾರ್ ನಾಯಕ್, ಕಾಂತಾರ ಚಲನಚಿತ್ರ ನಟ ಸ್ಬರಾಜ್ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ, ನಿವೃತ್ತ ಆರ್‌ಟಿಒ ಎಸ್‌ಎಂ ವರ್ನೇಕರ್, ಶ್ರೀ ನಿಧಿ ಮಿಥುನ್, ಉಮೇಶ್ ಭಟ್, ಮುಹಮ್ಮದ್ ರಫೀಕ್, ರಾಘವೇಂದ್ರ ಪ್ರಸಾದ್, ಕಾರ್ತಿಕ್ ಹೆಗ್ಡೆ, ಮನಪಾ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಶ್ರೀರಾಮ್ ಫೈನಾನ್ಸ್ ಕಂಪೆನಿಯ ವಿವಿಧ ಸ್ತರದ ಮುಖ್ಯಸ್ಥರಾದ ನಂದಗೋಪಾಲ್, ಸತ್ಯ ನಾರಾಯಣ ಕೆ.ವಿ, ನಾಗರಾಜ್ ಬಿ, ಉಲ್ಲಾಸ್ ನಾಯಕ್, ಸದಾಶಿವ, ಚೇತನ್ ಅರಸ್ ಉಪಸ್ಥಿತರಿದ್ದರು. 

ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Similar News