ಪದವು ಪಶ್ಚಿಮ ವಾರ್ಡಿನ ರಾಜಕಾಲುವೆ ಕಾಮಗಾರಿಗೆ ಚಾಲನೆ

Update: 2022-12-08 15:00 GMT

ಮಂಗಳೂರು, ಡಿ.8: ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಕೋಡಂಗೆ ಭಾಗದಲ್ಲಿ 1.5 ಕೋ.ರೂ. ವೆಚ್ಚದಲ್ಲಿ ರಾಜಕಾಲುವೆಯ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಶಕ್ತಿನಗರದ ಕೋಡಂಗೆಯ ಪ್ರಮುಖ ರಸ್ತೆಯ ರಾಜಕಾಲುವೆಯ ಅಭಿವೃದ್ಧಿಗೆ 1.5 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದಿಂದ ನಗರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಂಪನಕಟ್ಟೆ, ಪಿವಿಎಸ್ ಮತ್ತಿತರ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಪಡಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ವಿಶೇಷ ಗಮನ ನೀಡಲಾಗಿದೆ ಎಂದರು.

ಈ ಸಂದರ್ಭ ಕಾರ್ಪೊರೇಟರ್ ವನಿತಾ ಪ್ರಸಾದ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಕಿಲಾ ಕಾವಾ, ಸ್ಥಳೀಯ ಮುಖಂಡರಾದ ವಿಜಯ್ ಶೆಣೈ, ರವಿಚಂದ್ರ, ಪ್ರಸಾದ್ ಆಚಾರ್ಯ, ಗೋಪಾಲ, ಪದ್ಮನಾಭ, ಶುಭಕರ್, ಬಾಬು ಶೆಟ್ಟಿ, ನಾಗೇಶ್, ಪುಷ್ಪ, ಸುಮನಾ, ಶೋಭಾ ಶೇಖರ್, ಲತಾ, ಸುನಿಲ್ ಅಂಗರಾಜು, ವಿಜಯ್ ಶೆಟ್ಟಿ, ರವೀಂದ್ರ, ದಿನೇಶ್ ರೈ, ಗಣೇಶ್ ಗೌಡ, ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

Similar News