ಪ್ರಧಾನಿ ಕಛೇರಿಯ ಕರೆಗೆ ಇಂಗ್ಲಿಷ್‌ ಪತ್ರಿಕೆಗಳು ನಡುಗುತ್ತವೆ: ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

Update: 2022-12-09 14:41 GMT

ಹೊಸದಿಲ್ಲಿ: ಪ್ರಧಾನಿ ಕಛೇರಿಯಿಂದ ಕರೆ ಹೋದರೆ ಇಂಗ್ಲಿಷ್‌ ಪತ್ರಿಕೆಗಳು ನಡುಗುತ್ತವೆ ಎಂದು ಬಿಜೆಪಿ (BJP) ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ (Subramanian Swamy) ಟ್ವೀಟ್‌ ಮಾಡಿದ್ದಾರೆ. 

“ಪಿಎಂಒ ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ. ಹೀಗಾಗಿ ಈ ಪತ್ರಿಕೆಗಳು ಅರ್ಹವಾದ ವಿಷಯಗಳನ್ನು ಹೊಂದಿದ್ದರೂ ಮೋದಿಯವರ ನೀತಿಗಳನ್ನು ವಿರೋಧಿಸುವವರ ಸುದ್ದಿಗಳನ್ನು ವರದಿ ಮಾಡುವುದಿಲ್ಲ. ಇತರೆ ಭಾರತೀಯ ಭಾಷಾ ಪತ್ರಿಕೆಗಳು ನನಗೆ ಉತ್ತಮ ಕವರೇಜ್ ನೀಡುತ್ತವೆ. ಇಲ್ಲಿಯವರೆಗೆ ನಾನು ತಲೆಕೆಡಿಸಿಕೊಂಡಿಲ್ಲ ಆದರೆ ಈಗ ಇಂಗ್ಲಿಷ್‌ ಗಾಗಿ ನಾನು ವಿದೇಶಿ ಮಾಧ್ಯಮಗಳಿಗೂ ಬೈಟ್‌ಗಳನ್ನು ನೀಡಲು ಪ್ರಾರಂಭಿಸುತ್ತೇನೆ.” ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿದಂತೆ ತನ್ನದೇ ಪಕ್ಷದ ವಿರುದ್ಧ ಪದೇ ಪದೇ ಬಹಿರಂಗ ಹೇಳಿಕೆ ನೀಡುತ್ತಾ ಬಂದಿರುವ ಸ್ವಾಮಿ ಹಲವು ಬಾರಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

Similar News