ಕೋಟೆಕಾರು: ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2022-12-12 17:27 GMT

ಕೋಟೆಕಾರು: ಪ.ಪಂ.ವ್ಯಾಪ್ತಿಯ ಅಡ್ಕಬೈಲು ನಿವಾಸಿ  ಶಿವಸುಬ್ರಹ್ಮಣ್ಯ ಪ್ರಸಾದ್‌ ಎಂಬವರ  ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮುಂಬಾಗಿಲಿನ ಬೀಗವನ್ನು ಮುರಿದ ಕಳ್ಳರು ಒಳಗೆ ಪ್ರವೇಶಿಸಿ ಬೆಡ್ ರೂಮಿನ ಒಳಗಡೆ ಇದ್ದ ಕಪಾಟಿನ ಬಾಗಿಲನ್ನು ಮುರಿದು ಜಾಲಾಡಿದ್ದಾರೆ. ಕಪಾಟಿನ ಒಳಗಡೆ ಇದ್ದ 1 ಚಿನ್ನದ ಬಳೆ, 3 ಚಿನ್ನದ ಉಂಗುರ ಕಿವಿಯೋಲೆ ಸಹಿತ ಒಟ್ಟು 32 ಗ್ರಾಂ ಚಿನ್ನಾಭರಣ, ಕಳವು ಮಾಡಿದ್ದಾರೆ. ಕಳವಾದ ಚಿನ್ನಾಭರಣಗಳ ಮೌಲ್ಯ ರೂ.1,10,000 ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೇ 10 ಸಾವಿರ ಮೌಲ್ಯದ ಬೆಳ್ಳಿಯ 8 ಕ್ವಾಯಿನ್ ಗಳು.  3 ವಾಚುಗಳು ಹಾಗೂ ನಗದು ಹಣ ರೂ.11,000 ರೂ.ಗಳನ್ನು  ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳವಾದ ಎಲ್ಲಾ ಸೊತ್ತುಗಳ ಒಟ್ಟು  ಮೌಲ್ಯ ರೂ.1,49,000 ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿವಸುಬ್ರಹ್ಮಣ್ಯ ಪ್ರಸಾದ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Similar News