ಎಸ್‌ವೈಎಸ್ ‘ಜುಬಿಲಿ ಗಾರ್ಡ್’ಗೆ ಪದಾಧಿಕಾರಿಗಳ ಆಯ್ಕೆ

Update: 2022-12-17 14:54 GMT

ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಯುವಜನ  ಸಂಘದ ಮೂವತ್ತನೇ ವರ್ಷಾಚರಣೆಯ ಘೋಷಣಾ ಸಮಾವೇಶವು ಡಿ.24ರಂದು ನಗರದ ಪುರಭವನದಲ್ಲಿ ನಡೆಯಲಿದೆ.

ನಗರದ ಬೆಂದೂರುವೆಲ್ ಜಂಕ್ಷನ್‌ನಲ್ಲಿರುವ ಸುಮನ್ ರೆಸಿಡೆನ್ಸಿ ಸಭಾಂಗಣದಲ್ಲಿ ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಅಧ್ಯಕ್ಷತೆಯಲ್ಲಿ ಸಮಾವೇಶದ ನಿರ್ವಹಣೆಗಾಗಿ ‘ಎಸ್‌ವೈಎಸ್ ಜುಬಿಲಿ ಗಾರ್ಡ್’ ತಂಡಕ್ಕೆ ರೂಪು ಕೊಡಲಾಯಿತು.

ಜುಬಿಲಿ ಗಾರ್ಡ್‌ನ ಅಧ್ಯಕ್ಷರಾಗಿ ಸಲೀಂ ಅಡ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ಸಅದಿ ಖತರ್, ಕೋಶಾಧಿಕಾರಿಯಾಗಿ ಮೊಯ್ದೀನ್ ಅಲ್ ಸಫರ್ ಮುಕ್ಕ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಸೈಯದ್ ಇಸಾಕ್ ತಂಳ್ ಕಣ್ಣೂರು, ಅಬ್ದುರಹ್ಮಾನ್ ಸಅದಿ ಕಂಕನಾಡಿ, ಉಮರ್ ನ್ಯೂಪಡ್ಪು, ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಡ್ಯಾರ್, ಅಬ್ದುರಹ್ಮಾನ್ ಹಾಜಿ ಪ್ರಿಂಟೆಕ್, ಅಝೀಝ್ ಬಿಕರ್ನಕಟ್ಟೆ, ಕಾರ್ಯಕಾರಿ ಸದಸ್ಯರಾಗಿ ಹಾಫಿಳ್ ಯಾಕೂಬ್ ಸಅದಿ ನಾವೂರು, ಅಬ್ದುಲ್ಲತೀಫ್ ಮದನಿ ಕಲ್ಲಡ್ಕ, ಕೆಸಿ. ಸುಲೈಮಾನ್ ಮುಸ್ಲಿಯಾರ್ ಎಣ್ಮೂರ್, ಹಸನ್ ಪಾಂಡೇಶ್ವರ, ಮನ್ಸೂರ್ ಸಅದಿ ಮಾರ್ಕೆಟ್, ರಿಯಾಝ್ ಸಅದಿ ಗುರುಪುರ, ಯಹ್ಯಾ ಮದನಿ, ರಫೀಕ್ ಮದನಿ, ಅಬ್ಬಾಸ್ ಬಿಜೈ, ಇಬ್ರಾಹಿಂ ಮಾದರಿ ಪಂಪ್‌ವೆಲ್, ಅಬ್ದುಲ್ ಜಬ್ಬಾರ್ ಕಣ್ಣೂರು, ಬದ್ರುದ್ದೀನ್ ಅಡ್ಯಾರ್ ಪದವು, ನಝೀರ್ ವಳವೂರು, ಅಬ್ದುಲ್ ಹಮೀದ್ ತಲಪಾಡಿ, ಇಬ್ರಾಹೀಂ ಅಲ್‌ರಹ್ಬಾ, ಅಬ್ದುಲ್ ಹಮೀದ್ ಬೆಂಗರೆ, ಹನೀಫ್ ಮುಸ್ಲಿಯಾರ್ ವಿಟ್ಲ, ಇಕ್ಬಾಲ್ ಅಹ್ಸನಿ ಬಜಾಲ್, ಶಿಹಾಬ್ ಕಣ್ಣೂರು, ಸಿರಾಜ್ ಮರ್ಕಝ್, ಹನೀಫ್ ಬಿಕರ್ನಕಟ್ಟೆ ಅವರನ್ನು ಆರಿಸಲಾಯಿತು.

ಪರ್ಲ್ ಬೋಡಿ ವರ್ಕಿಂಗ್ ಕನ್‌ವೀನರ್ ಅಶ್ರಫ್ ಸಅದಿ ಮಲ್ಲೂರು ವಿಷಯ ಮಂಡಿಸಿದರು. ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಹನೀಫ್ ಹಾಜಿ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಮಾಲಿಕಿ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ ವಂದಿಸಿದರು.

Similar News