ಬೈಂದೂರು ಗಾಂಧಿ ಮೈದಾನ ಉಳಿಸಿ ಧರಣಿ ಮೂರನೇ ದಿನಕ್ಕೆ

Update: 2022-12-22 16:41 GMT

ಬೈಂದೂರು: ಇಲ್ಲಿನ ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಬೈಂದೂರು ಇದರ ವತಿಯಿಂದ ಗಾಂಧಿ ಮೈದಾನ ಉಳಿಸಿ ಧರಣಿ ಹಾಗೂ ಪ್ರತಿಭಟನೆ ಮೂರನೇ ದಿನವಾದ ಗುರುವಾರ ಬೈಂದೂರು ಗಾಂಧಿ ಮೈದಾನದ ಆವರಣದಲ್ಲಿ ಮುಂದುವರಿಯಿತು.

ಪ್ರತಿಭಟನೆಯಲ್ಲಿ ಗಾಂಧಿ ಮೈದಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಬಿಜೂರು, ವಜ್ರದುಂಬಿ ಗೆಳೆಯರ ಬಳಗದ ಅಧ್ಯಕ್ಷ ರಘುವೇಂದ್ರ, ಪ್ರಥ್ವಿ ಕ್ರೀಡಾ ಸಂಘದ ಸದಸ್ಯ ಮಹಾಬಲೇಶ್ವರ, ಬೈಂದೂರು ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಬಾಬು ರಾವ್ ಮೈಯ್ಯಾಡಿ ಬೈಂದೂರು, ಬೈಂದೂರು ದ.ಸಂ.ಸ ಮುಖಂಡರಾದ ಶಿವರಾಜ್, ಮೆಸ್ಕಾಂ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯ ಮಂಜುನಾಥ್ ರಾವ್, ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಮುಖಂಡರಾದ ಗಿರೀಶ್ ಬೈಂದೂರು, ಮುಖಂಡರಾದ ಸೀತಾರಾಮ್ ಎಚ್. ಪಡುವರಿ, ಗಣೇಶ್ ಪೂಜಾರಿ, ನಾಗರಾಜ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Similar News